ಅಮೆಚೂರ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಬೆಳ್ಳಿಹಬ್ಬ ಕಾರ್ಯಕ್ರಮಗಳ ಉದ್ಘಾಟನೆ
![](https://udupitimes.com/wp-content/uploads/2024/03/Screenshot_2024-03-24-20-05-03-54_99c04817c0de5652397fc8b56c3b3817-1024x380.jpg)
ಉಡುಪಿ: ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ಸ್ ಅಸೋಸಿ ಯೇಶನ್ ಇದರ ಬೆಳ್ಳಿಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ವಿವಿಧ ಕಾರ್ಯ ಕ್ರಮಗಳ ಉದ್ಘಾಟನಾ ಕಾರ್ಯಕ್ರಮ ಇಂದು ಅಂಬಲಪಾಡಿ ಕಾರ್ತಿಕ್ ಎಸ್ಟೇಟ್ ಹಾಲ್ನಲ್ಲಿ ಜರಗಿತು.
![](https://udupitimes.com/wp-content/uploads/2024/03/IMG_20240324_200540-1024x678.jpg)
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸ್ಥೆಯ ಮಾಜಿ ಅಧ್ಯಕ್ಷ ಅಶೋಕ್ ಅಡ್ಯಂತಾಯ ಮಾತನಾಡಿ, ಜಿಲ್ಲೆಯ ಕ್ರೀಡಾಪಟುಗಳಿಗೆ ಸಹಕಾರ ಹಾಗೂ ತರಬೇತಿ ನೀಡಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನಾಗಿ ಬೆಳೆಸುವುದೇ ನಮ್ಮ ಗುರಿಯಾಗಿದೆ. ರಾಜಕೀಯ ಇಲ್ಲದೆ ಕೇವಲ ಕ್ರೀಡಾಭಿಮಾನದಿಂದ ಮುಂದೆ ಸಾಗಬೇಕಾಗಿರುವುದು ಅತೀ ಅಗತ್ಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷರುಗಳಾದ ಅಶೋಕ್ ಅಡ್ಯಂತಾಯ, ರಘುರಾಮ್ ನಾಯಕ್, ಡಾ.ಕೆಂಪರಾಜು, ವಿವಿಧ ಪದಾಧಿಕಾರಿಗಳಾದ ಹರೀಶ್ ಹೆಗ್ಡೆ, ದಾದಪ್ಪ ಪೂಜಾರಿ, ಚಂದ್ರಶೇಖರ್ ಹೆಗ್ಡೆ, ಜಯರಾಮ್, ಕರುಣಾಕರ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.
![](https://udupitimes.com/wp-content/uploads/2024/03/Screenshot_2024-03-24-20-04-47-69_99c04817c0de5652397fc8b56c3b3817.jpg)
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಹರಿಪ್ರಸಾದ್ ರೈ ವಹಿಸಿದ್ದರು. ಕಾರ್ಯದರ್ಶಿ ದಿನೇಶ್ ಕುಮಾರ್ ಸ್ವಾಗತಿಸಿ, ವಂದಿಸಿದರು. ಡಾ.ರಾಮಚಂದ್ರ ಪಾಟ್ಕರ್ ಕಾರ್ಯಕ್ರಮ ನಿರೂಪಿಸಿದರು.