ಉಡುಪಿ: No.1 ಬೀಡಿಯ ಮಾಲಕ ತಾಂಗದಗಡಿ ಟಿ.ಕೃಷ್ಣಪ್ಪ ನಿಧ‌ನ

ಉಡುಪಿ, ಮಾ.19(ಉಡುಪಿ ಟೈಮ್ಸ್ ವರದಿ) No.1 ಬೀಡಿಯ ಮಾರ್ಕಿನ ಮಾಲಕ ತಾಂಗದಗಡಿ ನಿವಾಸಿ ಟಿ.ಕೃಷ್ಣಪ್ಪ (78) ಇಂದು ನಸುಕಿನ ವೇಳೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕರಾವಳಿಯಾದ್ಯಾಂತ ಪ್ರಖ್ಯಾತಿ ಪಡೆದ No.1 ಬೀಡಿಯನ್ನು ಮಾರುಕಟ್ಟೆಗೆ ಸುಮಾರು 51 ವರ್ಷಗಳಿಂದ ಒದಗಿಸುತ್ತಿದ್ದ ಟಿ.ಕೃಷ್ಣಪ್ಪ ಅವರು ಕಿಡ್ನಿ ಸಮಸ್ಯೆಯಿಂದ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಅವರು ಇಂದು ನಸುಕಿನ‌ ಜಾವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಕುಟುಂಬ ಮೂಲವು ತಿಳಿಸಿವೆ.

ಮೃತರು ಪತ್ನಿ, ಇಬ್ಬರು ಗಂಡು, ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!