ಸಿಎ ಅಂತಿಮ ಪರೀಕ್ಷೆ: ಉಡುಪಿಯ ನವ್ಯ ಉತ್ತೀರ್ಣ
![](https://udupitimes.com/wp-content/uploads/2024/01/IMG_20240127_154012.jpg)
ಉಡುಪಿ ಜ.27(ಉಡುಪಿ ಟೈಮ್ಸ್ ವರದಿ): ಹೊಸ ದಿಲ್ಲಿಯ ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ 2023ರ ನವೆಂಬರ್ ನಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಉಡುಪಿಯ ವಿದ್ಯಾರ್ಥಿ ನವ್ಯ ಉತ್ತೀರ್ಣರಾಗಿ ಸಾಧನೆ ಮಾಡಿದ್ದಾರೆ.
ಉಡುಪಿಯ ಚಿತ್ತರಂಜನ್ ವೃತ್ತದ ಬಳಿಯ ನೂತನ್ ಸಲೂನ್ ಮಾಲಿಕ ದಿ.ಅಶೋಕ್ ಭಂಡಾರಿ ಹಾಗೂ ಪೂರ್ಣಿಮಾ ಅಶೋಕ್ ದಂಪತಿಗಳ ಪುತ್ರಿಯಾಗಿರುವ ನವ್ಯ ಅವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಧ್ಯಾಭ್ಯಾಸವನ್ನು ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್ನಲ್ಲಿ, ಬಿಕಾಂ ವಿದ್ಯಾಭ್ಯಾಸವನ್ನು ಉಡುಪಿಯ ಪೂರ್ಣ ಪ್ರಜ್ಞಾ ಕಾಲೇಜಿನಲ್ಲಿ. ಹಾಗೂ ಸಿಎ ಆರ್ಟಿಕಲ್ ಶಿಪ್ನ್ನು ಶಬ್ಬಿರ್ ಮತ್ತು ಗಣೇಶ್ ಚಾರ್ಟೆಡ್ ಅಕೌಂಟೆಂಟ್ಸ್ನಲ್ಲಿ ಪೂರ್ಣಗೊಳಿಸಿದ್ದಾರೆ.