ಕೋಟ: ಶ್ರೀರಾಮನ ಬ್ಯಾನರ್‌ಗೆ ಕಿಡಿಗೇಡಿಗಳಿಂದ ಹಾನಿ- ದೂರು ದಾಖಲು

ಕೋಟ, ಜ.22: ಬೇಳೂರು ಗ್ರಾಮದ ಬಡಾಬೆಟ್ಟು ಸರಕಾರಿ ಶಾಲೆಯ ಎದುರು ಜಂಕ್ಷನ್‌ನಲ್ಲಿ ಹಾಕಲಾದ ಶ್ರೀರಾಮ ಮಂದಿರ ಲೋಕಾರ್ಪಣೆ ಸಂಬಂಧ ಅಳವಡಿಸಲಾದ ಬ್ಯಾನರನ್ನು ಕಿಡಿಗೇಡಿಗಳು ಹರಿದು ಹಾಕಿರುವ ಘಟನೆ ಜ.21ರಂದು ರಾತ್ರಿ ವೇಳೆ ನಡೆದಿದೆ.

ರಾಘವೇಂದ್ರ, ಮಹೇಂದ್ರ, ಗಣೇಶ, ನಿತ್ಯಾನಂದ, ಸುರೇಂದ್ರ, ಮನೋಜ, ಶಿವಕುಮಾರ್ ಎಂಬವರ ಹೆಸರಿನಲ್ಲಿ ಹಾಕಲಾದ ಬ್ಯಾನರನ್ನು ದುಷ್ಕರ್ಮಿಗಳು ಗಣೇಶ, ನಿತ್ಯಾನಂದ, ಸುರೇಂದ್ರ, ಮನೋಜ, ಶಿವಕುಮಾರ್ ಮೇಲಿನ ದ್ವೇಷದಿಂದ ಅವರ ಹೆಸರುಗಳನ್ನು ಮಾತ್ರ ಬ್ಯಾನರ್‌ನಲ್ಲಿ ಹರಿದು ಹಾಕಿರುವುದಾಗಿ ದೂರಲಾಗಿದೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!