ಉಡುಪಿ: ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಆದರ್ಶ ಆಸ್ಪತ್ರೆಗೆ ಭೇಟಿ
![](https://udupitimes.com/wp-content/uploads/2024/01/IMG_20240112_143135.jpg)
ಉಡುಪಿ: 18 ರಂದು ಉಡುಪಿಯಲ್ಲಿ ಪರ್ಯಾಯ ಪೀಠಾರೋಹಣ ಮಾಡಲಿರುವ ಪುತ್ತಿಗೆ ಮಠದ ಪೂಜ್ಯ ಸುಗುಣೇಂದ್ರತೀರ್ಥ ಸ್ವಾಮೀಜಿ ಅವರು ಬುಧವಾರ ಬೆಳಗ್ಗೆ ಉಡುಪಿಯ ಆದರ್ಶ ಆಸ್ಪತ್ರೆಗೆ ಭೇಟಿ ನೀಡಿದರು.
![](https://udupitimes.com/wp-content/uploads/2024/01/IMG_20240112_143159.jpg)
ಸ್ವಾಮೀಜಿಯವರು ಆಗಮಿಸುವಾಗ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಡಾ। ಜಿ.ಎಸ್. ಚಂದ್ರಶೇಖರ್ ಹಾಗು ವಿಮಲಾ ಜಿ.ಎಸ್ ಸ್ವಾಗತಿಸಿ ಬರಮಾಡಿಕೊಂಡರು.
ಬಳಿಕ ಸ್ವಾಮೀಜಿಯವರಿಗೆ ಪಾದಪೂಜೆ ನೆರವೇರಿಸಲಾಯಿತು. ಸ್ವಾಮೀಜಿಗಳು ಆಶೀರ್ವಚನ ನೀಡುತ್ತಾ ಬಂದಂತಹ ಎಲ್ಲರಿಗೂ ಪರ್ಯಾಯದ ಆಮಂತ್ರಣ ನೀಡಿದರು. ಆಹಾರತಜ್ಞೆ ಅನುಶ್ರೀ ಅವರು ಸ್ವಾಮೀಜಿಯವರ ಕಿರು ಪರಿಚಯ ಮಾಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಆದರ್ಶ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.