ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳಕ್ಕೆ ಚಾಲನೆ

ಕಾರ್ಕಳ: 20ನೆ ವರ್ಷದ ಮಿಯ್ಯಾರು ಲವ ಕುಶ ಜೋಡುಕರೆ ಕಂಬಳವನ್ನು ದೀಪ ಬೆಳಗಿಸಿ
ಕಂಬಳ ಸಮಿತಿ ಅಧ್ಯಕ್ಷ ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ ಸುನೀಲ್ ಕುಮಾರ್ ಅವರು ಉದ್ಘಾಟಿಸಿದರು. ‌

ಮಿಯ್ಯರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದ ಪ್ರಧಾನ ಅರ್ಚಕರಾದ ಹರಿದಾಸ್ ಭಟ್ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು, ಮಿಯ್ಯಾರು ಚರ್ಚ್ ಧರ್ಮ ಗುರುಗಳಾದ ರೆ. ಫಾ. ಪೌಲ್ ರೇಗೊ ಕಂಬಳದ ಯಶಸ್ವಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಿಯ್ಯಾರು ಗ್ರಾಮ ಪಂಚಾಯತಿ ಅಧ್ಯಕ್ಷೆ ಸನ್ಮತಿ ನಾಯಕ್, ಕಂಬಳ ಸಮಿತಿ ಕಾರ್ಯಾಧ್ಯಕ್ಷ ಜೀವನ ದಾಸ್ ಅಡ್ಯಂತಾಯ, ಸಂಘಟನ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ , ಕೋಶಾಧಿಕಾರಿ ಶ್ಯಾಮ್ ಎನ್ ಶೆಟ್ಟಿ, ಸಹ ಕೊಶಾಧಿಕಾರಿ ರವೀಂದ್ರ ಕುಮಾರ್, ಕಾರ್ಯದರ್ಶಿ ದಯಾನಂದ ಬಂಗೇರ , ಸಹ ಕಾರ್ಯದರ್ಶಿ ಪ್ರಕಾಶ್ ಬಲಿಪ , ಉಪಾಧ್ಯಕ್ಷರುಗಳಾದ ಸುನೀಲ್ ಕುಮಾರ್ ಬಜಗೋಳಿ, ಅಂತೋನಿ ಡಿಸೋಜ, ಶಾಂತಿರಾಜ್ ಜೈನ್, ಉದಯ ಎಸ್ ಕೋಟ್ಯಾನ್, ಕೆ ಶ್ಯಾಮ ಶೆಟ್ಟಿ, ಪುರಸಭಾ ಸದಸ್ಯರು ಗಳಾದ ಶುಭದ ರಾವ್ ,ಅವಿನಾಶ್ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ಮಾಧವ ಕಾಮತ್, ಎಂ ಜಯರಾಮ್ ಪ್ರಭು, ಜೆರಾಲ್ಡ್ ಡಿ ಸಿಲ್ವ, ಉಮೇಶ್ ರಾವ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!