ಉಡುಪಿ: ಸೊಸೈಟಿಯಲ್ಲಿ 30 ಲಕ್ಷ ರೂ.ಸಾಲ ಪಡೆದು ವಂಚನೆ

ಉಡುಪಿ, ಡಿ.23: ಸಾಲ ಮರುಪಾವತಿಸದೆ ಸೊಸೈಟಿಯೊಂದಕ್ಕೆೆ ವಂಚಿಸಿದ ಘಟನೆ ನಡೆದಿದೆ.

ಬಡಾನಿಡಿಯೂರಿನ ಸರಸು ಸುವರ್ಣ ಅವರು ಸೊಸೈಟಿಯೊಂದರಲ್ಲಿ 30 ಲ.ರೂ.ಸಾಲ ತೆಗೆದುಕೊಂಡಿದ್ದು, ಇದಕ್ಕಾಾಗಿ ನಿವೇಶನ ಹಾಗೂ ಮನೆಯನ್ನು ಅಡಮಾನವಾಗಿರಿಸಿಕೊಂಡಿದ್ದರು. ಈ ಅಡಮಾನ ಪತ್ರವು ಉಡುಪಿ ಉಪನೋಂದಣಾ ಧಿಕಾರಿಯವರ ಕಚೇರಿಯಲ್ಲಿ ನೋಂದಣಿ ಮಾಡಲಾಗಿದ್ದು, ಆ ನೋಂದಣಿ ಪತ್ರಕ್ಕೆೆ ವಿನೋದ್ ಅವರು ಸಾಕ್ಷಿಯಾಗಿದ್ದರು. ಈ ಸಾಲ ಸಂಪೂರ್ಣವಾಗಿ ಮರುಪಾವತಿಯಾಗಿರಲಿಲ್ಲ. ಸೊಸೈಟಿಯಲ್ಲಿ ಸಾಲವಿದ್ದರೂ ಸರಸು ಸುವರ್ಣ ಹಾಗೂ ವ ವಿನೋದ್ ಅವರು ಸೇರಿಕೊಂಡು ಅಡಮಾನವಿರಿಸಿದ ಆಸ್ತಿಯನ್ನು 2022ರಲ್ಲಿ 2ನೇ ಆರೋಪಿ ವಿನೋದ್ ತನ್ನ ಹೆಸರಿಗೆ ಅಕ್ರಮವಾಗಿ ವರ್ಗಾಯಿಸಿಕೊಂಡು ಸೊಸೈಟಿಗೆ ದ್ರೋಹ ಎಸಗಿದ್ದಾರೆ ಎಂದು ಸೊಸೈಟಿಯ ಸಿಇಓ ಉಡುಪಿ ನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಾರೆ.

Leave a Reply

Your email address will not be published. Required fields are marked *

error: Content is protected !!