ಉಡುಪಿ ಯೂನಿಯನ್ ಬ್ಯಾಂಕ್: ಗ್ರಾಹಕರ ಸಮಾವೇಶ
![](https://udupitimes.com/wp-content/uploads/2023/12/Screenshot_2023-12-15-21-04-39-99_99c04817c0de5652397fc8b56c3b3817-1024x742.jpg)
ಉಡುಪಿ, ಡಿ.15: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಉಡುಪಿ ಶಾಖೆಯ ವತಿಯಿಂದ ಗ್ರಾಹಕರ ಸಮಾವೇಶವು ಶುಕ್ರವಾರ ಉಡುಪಿ ಶಾಖೆಯಲ್ಲಿ ಜರಗಿತು.
![](https://udupitimes.com/wp-content/uploads/2023/12/Screenshot_2023-12-15-21-02-35-13_99c04817c0de5652397fc8b56c3b3817-1024x803.jpg)
![](https://udupitimes.com/wp-content/uploads/2023/12/IMG_20231215_210035-1024x639.jpg)
ಬ್ಯಾಂಕಿನ ಉಡುಪಿ ಪ್ರಾದೇಶಿಕ ವಲಯದ ಮುಖ್ಯಸ್ಥ ಹಾಗೂ ಸಹಾಯಕ ಮಹಾ ಪ್ರಬಂಧಕ ನರೇಶ್ ಕುಮಾರ್ ವೈ ಮಾತನಾಡಿ, ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುವುದು ನಮ್ಮ ಆದ್ಯತೆಯಾಗಿದೆ.
![](https://udupitimes.com/wp-content/uploads/2023/12/Screenshot_2023-12-15-21-05-49-70_99c04817c0de5652397fc8b56c3b3817-1024x682.jpg)
ಯಾವುದೇ ಲೋಪಗಳಿದ್ದರೂ ಮುಕ್ತವಾಗಿ ನಮ್ಮೊಂದಿಗೆ ಹಂಚಬಹುದಾಗಿದೆ. ಉತ್ತಮ ಕಾರ್ಯಗಳ ಮೂಲಕ ಗ್ರಾಹಕರಿಗೆ ಇನ್ನಷ್ಟು ಸೇವೆ ನೀಡುವುದು ಮುಖ್ಯ ಎಂದು ತಿಳಿಸಿದರು. ಉತ್ತಮ ಗ್ರಾಹಕರಿಂದಲೇ ನಮ್ಮ ಬ್ಯಾಂಕ್ ಜನಸ್ನೇಹಿ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
![](https://udupitimes.com/wp-content/uploads/2023/12/Screenshot_2023-12-15-21-04-22-08_99c04817c0de5652397fc8b56c3b3817-1024x722.jpg)
ಈ ಸಂದರ್ಭದಲ್ಲಿ ಬ್ಯಾಂಕಿನ ಹಿರಿಯ ಗ್ರಾಹಕರನ್ನು ಗೌರವಿಸಲಾಯಿತು. ಉಡುಪಿ ಶಾಖೆಯ ಮುಖ್ಯ ಪ್ರಬಂಧಕ ವೆಂಕಟೇಶ್ ಬಿ.ವಿ. ಮಾತನಾಡಿದರು. ಸಿಬ್ಬಂದಿ ನಾಗೇಶ್ ನಾಯಕ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.