ಉದ್ಯಾವರ ಸೇತುವೆಯಿಂದ ವ್ಯಕ್ತಿ ನದಿಗೆ ಹಾರಿರುವ ಶಂಕೆ
![](https://udupitimes.com/wp-content/uploads/2023/12/IMG_20231213_142321.jpg)
ಕಾಪು, ಡಿ.13(ಉಡುಪಿ ಟೈಮ್ಸ್ ವರದಿ ): ಇಲ್ಲಿನ ಉದ್ಯಾವರದ ಸೇತುವೆ ಮೇಲಿನಿಂದ ವ್ಯಕ್ತಿಯೋರ್ವ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಸಂಶಯದ ಮೇರೆಗೆ ಸಾರ್ವಜನಿಕರು ನದಿಯಲ್ಲಿ ಹುಡುಕಾಟ ಆರಂಭಿಸಿದ್ದಾರೆ.
![](https://udupitimes.com/wp-content/uploads/2023/12/IMG_20231213_142442-1024x624.jpg)
ಘಟನಾ ಸ್ಥಳದಲ್ಲಿ ಸ್ಕೂಟಿ, ಚಪ್ಪಲಿ ದೊರೆತ ಹಿನ್ನೆಲೆ ಹುಡುಕಾಟ ಆರಂಭಿಸಿದ್ದು, ಕಾಪು ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳೀಯ ಮೀನುಗಾರರ ಸಹಾಯದಿಂದ ದೋಣಿಯಲ್ಲಿ ಹುಡುಕಾಟ ಆರಂಭಿಸಿದ್ದಾರೆ. ಉಡುಪಿಯ ಖಾಸಗಿ ಎಲೆಕ್ಟ್ರಾನಿಕ್ ಸಂಸ್ಥೆ ಉದ್ಯೋಗಿಯ ದ್ವಿಯ ವಾಹನ ಎಂದು ಸಂಶಯಿಸಲಾಗಿದೆ.