ಬೈಂದೂರು: ಕಾರಿನಲ್ಲಿ ಅಕ್ರಮ ಮರಳು‌ ಸಾಗಾಟ- ಓರ್ವ ವಶಕ್ಕೆ

ಬೈಂದೂರು: ಓಮಿನಿ ಕಾರಿನಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬೈಂದೂರು ಪೊಲೀಸರು ಉಪ್ಪುಂದ ಗ್ರಾಮದ ಕರ್ಕಿಕಳಿ ಎಂಬಲ್ಲಿ ಡಿ.6ರಂದು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಪ್ಪುಂದ ನಿವಾಸಿ ಪ್ರವೀಣ ಚಂದ್ರ(53) ಎಂಬಾತ ಕರ್ಕಿಕಳಿ ಎಂಬಲ್ಲಿ ಸಮುದ್ರ ಬದಿಯಲ್ಲಿನ ಮರಳನ್ನು ಸುಮಾರು 25 ಚೀಲಗಳಲ್ಲಿ ತುಂಬಿಸಿ ಓಮಿನಿ ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಕಾರು, ಮರಳು ಸಹಿತ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!