ಚಿನ್ನಾಭರಣ ಅಂಗಡಿಯ ಲಕ್ಷಾಂತರ ರೂ.ದುರುಪಯೋಗ: ದೂರು ದಾಖಲು

ಬೈಂದೂರು, ನ.18: ಚಿನ್ನಾಭರಣ ಅಂಗಡಿಯ ಗ್ರಾಹಕರ 34.53 ಲಕ್ಷ ರೂ. ಹಣವನ್ನು ದುರುಪಯೋಗ ಮಾಡಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಪ್ಪುಂದದ ನಿತ್ಯಾನಂದ ಎಂಬವರು ಮಾರುತಿ ಗೋಲ್ಡ್ ಜ್ಯುವೆಲ್ಲರ್ಸ್‌ ಎಂಬ ಚಿನ್ನಾಭರಣ ಮಳಿಗೆಯನ್ನು 2019ರ ಮೇ ತಿಂಗಳಲ್ಲಿ ಪ್ರಾರಂಭಿಸಿದ್ದು, ಈ ವ್ಯವಹಾರ ನೋಡಿಕೊಳ್ಳುತ್ತಿದ್ದ ಆರೋಪಿ ಗಿರೀಶ್ ಎಂಬಾತ ಚಿನ್ನಾಭರಣ, ಹಣ ದುರುಪ ಯೋಗ ಮಾಡಿದ್ದನು. ಆತನ ವಿರುದ್ಧ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದನು.

ಇದೀಗ ಆರೋಪಿ ನ್ಯಾಯಾಲಯದ ಷರತ್ತುಗಳನ್ನು ಉಲ್ಲಂಘಿಸಿ ಸಂಸ್ಥೆಗೆ ಗ್ರಾಹಕರಿಂದ ಬರಬೇಕಾದ ಬಾಕಿ 69,86,000 ರೂ. ಹಣದಲ್ಲಿ, 2002ರ ಜ.10ರಿಂದ 2023ರ ಸೆ.30ರ ಅವಧಿಯಲ್ಲಿ ಒಟ್ಟು 34,53,072 ರೂ. ಹಣವನ್ನು ಆನ್‌ಲೈನ್ ಹಾಗೂ ನಗದು ಮೂಲಕ ಪಡೆದು ವಂಚನೆ ಮಾಡಿರುವುದಾಗಿ ದೂರಲಾಗಿದೆ.

Leave a Reply

Your email address will not be published. Required fields are marked *

error: Content is protected !!