ಉಡುಪಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದ ಎಸ್ಡಿಪಿಐ
ಉಡುಪಿ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧಿಸುತ್ತೆವೆ ಎನ್ನುವ ಮಾತು ಹೊರ ಬೀಳುತಿದ್ದಂತೆ ಎಸ್ಡಿಪಿಐ ಕಾಂಗ್ರೆಸ್ ಬೆಂಬಲ ಘೋಷಿಸಿದೆ.
ಕಾಂಗ್ರೆಸ್ ಎಸ್.ಡಿ.ಪಿ.ಐ. ಮೈತ್ರಿ ಮಾಡಲು ಮೇ.5 ರಂದು ಮಸೀದಿಯಲ್ಲಿ ಮೌಲ್ವಿಗಳ ನೇತೃತ್ವದಲ್ಲಿ ಶುಕ್ರವಾರದ ಪ್ರಾರ್ಥನೆ ನಂತರ ಉಡುಪಿ ಕ್ಷೇತ್ರದ ನಗರಸಭೆ ಮತ್ತು ತಾಲೂಕಿನ ಎಲ್ಲಾ ಮಸೀದಿಯಲ್ಲಿ ಕಾಂಗ್ರೆಸ್ಸಿಗೆ ಎಲ್ಲಾ ಮುಸ್ಲಿಂ ಸಮುದಾಯ ಬೆಂಬಲ ಸೂಚಿಸಲು ಸಮಯ ನಿಗದಿ ಮಾಡಿದೆ.
ಕಾಂಗ್ರೆಸ್ ಮುಸ್ಲಿಂ ಮತದ ಆಸೆಯನ್ನು ಜೀವಂತಗೊಳಿಸಲು ಸಾಕಷ್ಟು ಶ್ರಮಿಸಿದ್ದು ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ.
ಹಿಜಾಬ್ ವಿವಾದ ಸಂದರ್ಭದಲ್ಲಿ ಮತೀಯವಾದಿ ಮತಾಂಧ ಜಿಹಾದಿಗಳ ವಿರುದ್ಧ ಗಟ್ಟಿ ಧ್ವನಿಯಾಗಿ ಬಡ ವಿದ್ಯಾರ್ಥಿನಿಯರ ಪರ ನಿಂತು ಸಿಎಫ್ಐ, ಎಸ್ಡಿಪಿಐ ಸಂಘಟನೆಗಳಿಗೆ ಸೆಡ್ಡು ಹೊಡೆದು ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿದ ಯಶ್ ಪಾಲ್ ಸುವರ್ಣರ ಸೋಲಿಗೆ ಪಣತೊಟ್ಟ ಎಸ್ಡಿಪಿಐ ಉಡುಪಿ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ಗೆ ಬೆಂಬಲ ನೀಡಿದೆ.