ವಿಧಾನಸಭೆ ಚುನಾವಣೆ: ಬಿಜೆಪಿಯ 3ನೇ ಪಟ್ಟಿ ಬಿಡುಗಡೆ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಬಿಜೆಪಿಯು ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ ಮಾಡಿದೆ.

ಜಗದೀಶ್ ಶೆಟ್ಟರ್ ಶಾಸಕರಾಗಿದ್ದ ಹುಬ್ಬಳ್ಳಿ- ಧಾರವಾಡ ಕೇಂದ್ರ ಕ್ಷೇತ್ರಕ್ಕೆ ಮಹೇಶ್ ಟೆಂಗಿನಕಾಯಿ ಹೆಸರು ಘೋಷಿಸಲಾಗಿದೆ.

ಈ ಬಾರಿ ಅರವಿಂದ್ ಲಿಂಬಾವಳಿ ಬದಳಿಗೆ ಅವರ ಪತ್ನಿ ಮಂಜುಳ ಅರವಿಂದ್ ಲಿಂಬಾವಳಿ ಅವರಿಗೆ ಮಹದೇವಪುರದಿಂದ ಟಿಕೆಟ್ ನೀಡಲಾಗಿದೆ. ಇನ್ನು ಕೃಷ್ಣರಾಜ ಕ್ಷೇತ್ರದಿಂದ ರಾಮದಾಸ್ ಗೆ ಟಿಕೆಟ್ ಕೈತಪ್ಪಿದ್ದು ಶ್ರೀವತ್ಸ ಎಂಬುವರಿಗೆ ಟಿಕೆಟ್ ನೀಡಲಾಗಿದೆ.

ಹೆಬ್ಬಾಳದಿಂದ ಕಟ್ಟಾ ಜಗದೀಶ್, ನಗ್ತಾನ್ ನಿಂದ ಸಂಜೀವ್ ಐಹೊಳೆ, ಸೆಡಂನಿಂದ ರಾಜಕುಮಾರ್ ಪಾಟೀಲ್, ಕೊಪ್ಪಳದಿಂದ ಮಂಜುಳಾ ಅಂಬರೀಶ್, ರೋಣಾದಿಂದ ಕಳಕಪ್ಪ ಬಂಡಿ, ಹಗರಿ ಬೊಮ್ಮನಹಳ್ಳಿಯಿಂದ ಬಿ. ರಾಮಣ್ಣ, ಗೋವಿಂದರಾಜನಗರದಿಂದ ಉಮೇಶ್ ಶೆಟ್ಟಿ ಹೆಸರು ಘೋಷಣೆಯಾಗಿದೆ. 

ಒಟ್ಟಾರೆ 224 ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳ ಟಿಕೆಟ್ ಘೋಷಣೆಯಾಗಿದ್ದು ಇನ್ನು ಶಿವಮೊಗ್ಗ ನಗರ ಮತ್ತು ಮಾನ್ವಿ ಕ್ಷೇತ್ರದ ಟಿಕೆಟ್ ಘೋಷಣೆ ಬಾಕಿ ಇದೆ.

ಅಭ್ಯರ್ಥಿಗಳ ಪಟ್ಟಿ:

ಹುಬ್ಬಳ್ಳಿ- ಧಾರವಾಡ- ಮಹೇಶ್ ಟೆಂಗಿನಕಾಯಿ

ಕೊಪ್ಪಳ- ಮಂಜುಳಾ ಅಮರೇಶ್

ರೋಣ- ಕಳಕಪ್ಪ ಬಂಡಿ

ಸೇಡಂ- ರಾಜಕುಮಾರ್ ಪಾಟೀಲ್

ನಾಗಠಾಣ- ಸಂಜೀವ್ ಈಹೊಳೆ

ಗೋವಿಂದ ರಾಜ ನಗರ- ಉಮೇಶ್ ಶೆಟ್ಟಿ

ಹೆಬ್ಬಾಳ- ಕಟ್ಟಾ ಜಗದೀಶ್

ಮಹದೇವ ಪುರ (SC)- ಮಂಜುಳಾ ಅರವಿಂದ ಲಿಂಬಾವಳಿ

ಕೃಷ್ಣರಾಜ – ಶ್ರೀ ವತ್ಸ

ಹರಿಗ ಬೊಮ್ಮನ ಹಳ್ಳಿ- ಬಿ. ರಾಮಣ್ಣ

Leave a Reply

Your email address will not be published. Required fields are marked *

error: Content is protected !!