ಉಡುಪಿ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ- ಚಾಲಕ ಪಾರು

ಉಡುಪಿ: ಇಂದ್ರಾಳಿಯ ಬಸ್ ನಿಲ್ದಾಣ ಬಳಿ ಕಾರೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕಾರು ಸಂಪೂರ್ಣ ಸುಟ್ಟು ಕರಕಾಲದ ಘಟನೆ ತಡರಾತ್ರಿ ನಡೆದಿದೆ.

ಕಿನ್ನಿಮೂಲ್ಕಿಯ ಮುರಳೀಧರ್ ಎಂಬವರು ಕೋಲ ವೀಕ್ಷಿಸಿ ಹಿಂದಿರುಗಿ ಬರುತ್ತಿದ್ದ ಸಂದರ್ಭ ಇಂದ್ರಾಳಿ ಪೆಟ್ರೋಲ್ ಬಂಕ್ ಎದುರು ಕಾರಿನ ಎಸಿಯಲ್ಲಿ ಶಾರ್ಟ್ ಆಗಿ ಬೆಂಕಿ ಕಾಣಿಸಿಕೊಂಡಿತ್ತು.

ತಕ್ಷಣ ಅವರು ಬೆಂಕಿ ನಂದಿಸಲು‌ ಪ್ರಯತ್ನ ಪಟ್ಟರು. ಆದರೆ ಅಷ್ಟೋತ್ತಿಗೆ ಬೆಂಕಿ ಕಾರಿನ ಎಲ್ಲಾ ಭಾಗಗಳಿಗೆ ಹತ್ತಿಕೊಂಡಿತ್ತು ಎನ್ನಲಾಗಿದೆ. ಇದರಿಂದ ಎಚ್ಚೆತ್ತ ಅವರು ಕಾರಿನಿಂದ ಇಳಿದು ರಕ್ಷಿಸಿಕೊಂಡರು. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ಆದರೆ ಅಷ್ಟರೊಳಗೆ ಕಾರು ಬೆಂಕಿಯ ಕೆನ್ನಾಲಗೆ ಸುಟ್ಟು ಕರಕಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿ ಸತೀಶ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!