ಕಾರ್ಕಳ: ದಾರಿ ವಿಚಾರಕ್ಕೆ ನೆರೆಮನೆಯಾತನಿಗೆ ಹಲ್ಲೆ
ಕಾರ್ಕಳ ಫೆ.19(ಉಡುಪಿ ಟೈಮ್ಸ್ ವರದಿ): ದಾರಿಯ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರಿಗೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿರುವ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಮ್ಯಾಕ್ಸಿಮ್ ಡಿ ಸಿಲ್ವಾ ಇವರು ಫೆ.18 ರಂದು ಸಂಜೆ ಕೆಲಸ ಮುಗಿಸಿ ತಮ್ಮ ಕಾರಿನಲ್ಲಿ ಮನೆಗೆ ಹೋಗುತ್ತಿದ್ದರು ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ನ್ಯೂ ಕುರ್ಗಾಂಜೆ ಹೌಸ್ ಎಂಬಲ್ಲಿ ಮನೆಗೆ ಹೋಗುವ ರಸ್ತೆಯ ಗೇಟ್ ನ ಬಳಿ ತಲುಪಿದಾಗ ಅಪಾದಿತ ಅಂತೋನಿ ಎಲಿಯಾಸ್ ಡಿಸಿಲ್ವಾ ತನ್ನ ಕಾರನ್ನು ರಸ್ತೆಯಲ್ಲಿ ಇಟ್ಟಿದ್ದು ಮನೆಗೆ ಹೋಗಲು ಗೇಟನ್ನು ತೆಗೆಯಲು ಹೋದಾಗ ಅಪಾದಿತನು ಕಾರಿನಿಂದ ಇಳಿದು ಬಂದು ಮ್ಯಾಕ್ಸಿಮ್ ಡಿ ಸಿಲ್ವಾ ಅವರನ್ನು ತಡೆದು ಅಡ್ಡಕಟ್ಟಿ ನೀನು ಯಾರ ಜಾಗದಲ್ಲಿ ಹೋಗುತ್ತೀಯಾ, ಒಳಗೆ ಹೋದರೆ ನಿನ್ನ ಕೈಕಾಲು ಮುರಿದು ಹಾಕುತ್ತೇನೆ ಎಂದು ಅವಾಚ್ಯ ಶಬ್ಧಗಳಿಂದ ಬೈದು, ಹೊಡೆದು ಹಲ್ಲೆ ನಡೆಸಿದ್ದು ಮಾತ್ರವಲ್ಲದೆ ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.