ಹಿರಿಯಡ್ಕ: ಮಾಣಾಯಿ ಶ್ರೀಮುಖ್ಯಪ್ರಾಣ ಮಠದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ ಫೆ.18(ಉಡುಪಿ ಟೈಮ್ಸ್ ವರದಿ):  ಹಿರಿಯಡಕದ ಮಾಣಾಯಿ ಶ್ರೀಮುಖ್ಯಪ್ರಾಣ ಮಠದ ನೂತನ ಸುತ್ತು ಪೌಳಿಯ ಸಮರ್ಪಣೆ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಉಡುಪಿಯ ಶ್ರೀಕೃಷ್ಣ ಮಠದಲ್ಲಿ  ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕುಯಿಲಾಡಿ ಸುರೇಶ ನಾಯಕ್, ಪ್ರಧಾನ ಅರ್ಚಕರು ಮತ್ತು ಕಾರ್ಯದರ್ಶಿಗಳಾದ ಮಾಧವ ಉಪಾಧ್ಯಾಯ, ವಿದ್ವಾನ್ ಪ್ರೊ.ಹೆರ್ಗ ಹರಿಪ್ರಸಾದ್ ಭಟ್, ಕಿದಿಯೂರು ಉದಯ ಕುಮಾರ್ ಶೆಟ್ಟಿ, ದಿನೇಶ್ ಭಟ್, ಪರ್ಯಾಯ ಸ್ವಾಗತ ಸಮಿತಿ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!