ಸುಳ್ಯ: ವಿವಾಹಿತ ಮಹಿಳೆಯೊಂದಿಗೆ ಜಾಲಿ ಡ್ರೈವ್- ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಿಜೆಪಿ ಮುಖಂಡ!
ಸುಳ್ಯ, ಫೆ.2: ತಾಲೂಕಿನ ಜಾಲ್ಸೂರಿನಲ್ಲಿ ಬಿಜೆಪಿ ಮುಖಂಡನೋರ್ವ ವಿವಾಹಿತ ಮಹಿಳೆಯನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದಾಗ ರೆಡ್ ಹ್ಯಾಂಡಾಗಿ ಮಹಿಳೆಯ ಪತಿಯ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.
ಬಂಟ್ವಾಳ ತಾಲೂಕು ಕೇಪು ಗ್ರಾಮ ಮುಳಿಯಾಲ ಮುಗೇರು ನಿವಾಸಿ, ಪುಣಚ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷರೆನ್ನಲಾದ ಹರಿಪ್ರಸಾದ್ ಯಾದವ್ ಪ್ರಕರಣದ ಆರೋಪಿ.
ಇತ್ತ ಮಹಿಳೆಯನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ
ಆಕೆಯ ಪತಿಯನ್ನು ಕಂಡ ಬಿಜೆಪಿ ಮುಖಂಡ ಆಕೆಯನ್ನು ಕಾರಿನಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದ್ದು, ಈ ಬಗ್ಗೆ ಮಹಿಳೆಯ ಪತಿ ಪುತ್ತೂರು ಸಹಾಯಕ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ಮಹಿಳೆಯ ಪತಿ,
ತನ್ನ ಪತ್ನಿ ಜ.31 ರಂದು ಒಡಿಯೂರು ಜಾತ್ರೆಗೆಂದು ತೆರಳಿದ್ದವಳನ್ನು ಆರೋಪಿ ಹರಿಪ್ರಸಾದ್ ಯಾದವ್ ಅನೈತಿಕ ಸಂಬಂಧ ನಡೆಸುವ ದುರುದ್ದೇಶದಿಂದ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಈ ಬಗ್ಗೆ ಮಾಹಿತಿ ತಿಳಿದ ತಾನು ಅವರನ್ನು ಬೈಕಿನಲ್ಲಿ ಹಿಂಬಾಲಿಸಿಕೊಂಡು ಹೋಗಿ ಸುಳ್ಯ ತಾಲೂಕಿನ ಜಾಲ್ಸೂರು ಎಂಬಲ್ಲಿ ಕಾರನ್ನು ತಡೆಯಲು ಯತ್ನಿಸಿದ್ದೇನೆ. ಈ ವೇಳೆ ಹರಿಪ್ರಸಾದ್ ಕಾರು ನಿಲ್ಲಿಸಿದೆ ತನ್ನ ಮೇಲೆಯೇ ಹಾಯಿಸಿ ಕೊಲ್ಲಲು ಯತ್ನಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಹಾಗೂ
ಈ ಸಂದರ್ಭ ಸ್ಥಳಕ್ಕಾಗಮಿಸಿದ ಸ್ಥಳೀಯರನ್ನು ಕಂಡ ಆರೋಪಿ ಹರಿಪ್ರಸಾದ್ ಸ್ಥಳದಿಂದ ಓಡಿ ಹೋಗಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.