ಬುಡಕಟ್ಟು ನಿವಾಸಿಗಳ ಮನೆಯಲ್ಲಿ ಊಟ ಸವಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಕೇರಳ ಸೆ.10 (ಉಡುಪಿ ಟೈಮ್ಸ್ ವರದಿ): ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕೇರಳದ ವಾಮನಪುರಂ ವಿಧಾನಸಭಾ ಕ್ಷೇತ್ರದ ಬುಡಕಟ್ಟು ಗ್ರಾಮವಾದ ನ್ಜರನೀಲಿಗೆ ಭೇಟಿ ನೀಡಿದರು.

ಈ ವೇಳೆ ಅಲ್ಲಿನ ಬುಡಕಟ್ಟು ಸಮುದಾಯದವರೊಂದಿಗೆ ಮಾತುಕತೆ ನಡೆಸಿದ ಅವರು ಬಳಿಕ ನಿವಾಸಿಗಳ ಮನೆಯಲ್ಲಿ ಬುಡಕಟ್ಟು ಜನರೊಂದಿಗೆ ಊಟವನ್ನು ಸವಿದರು.

ತಿರುವನಂತಪುರಂ ಜಿಲ್ಲೆಯ ಪೆರಿಂಗಮಲ ಪಂಚಾಯತ್ ನಲ್ಲಿರುವ ನ್ಜರನೀಲಿ ಎಂಬ ಕುಗ್ರಾಮವು ಬುಡಕಟ್ಟು ಗ್ರಾಮವಾಗಿದ್ದು, ಅವರಲ್ಲಿ ಹೆಚ್ಚಿನವರು ಕಣಿ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಾಸಿಸುವ ಕಣಿ ಸಮುದಾಯವು ಔಷಧೀಯ ಸಸ್ಯಗಳ ಸಾಂಪ್ರದಾಯಿಕ ಜ್ಞಾನಕ್ಕೆ ಹೆಸರುವಾಸಿಯಾಗಿದೆ.

Leave a Reply

Your email address will not be published. Required fields are marked *

error: Content is protected !!