ಕೊರೋನಾದ ಹಿನ್ನೆಲೆ: ಬಡ್ಡಿ ವಸೂಲಿ ಕುರಿತಂತೆ ಸ್ಪಷ್ಟ ನಿಲುವು ತಿಳಿಸಿ: ಸುಪ್ರೀಂ ಕೋರ್ಟ್

ನವದೆಹಲಿ: ಕೊರೋನಾದ ಹಿನ್ನೆಲೆಯಲ್ಲಿ ಆರ್ ಬಿ ಐ ಘೋಷಿಸಿರುವ  ನಿರ್ಬಂಧ ಅವಧಿಯಲ್ಲಿ ಸಾಲದ ಮೇಲಿನ ಬಡ್ಡಿ ವಸೂಲಿ ಮತ್ತು ಬಡ್ಡಿಯ ಮೇಲೆ ಬಡ್ಡಿ ವಸೂಲಿ ಕುರಿತಂತೆ ಸ್ಪಷ್ಟ ನಿಲುವು ತಿಳಿಸುವಂತೆ  ಎಂದು  ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ  ಸೂಚಿಸಿದೆ.

ಈ ಸಂಬಂಧ ಪ್ರಮಾಣ ಪತ್ರ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಆರ್ ಬಿ ಐ ಘೋಷಿಸಿರುವ ನಿರ್ಬಂಧ ಅವಧಿ ಆಗಸ್ಟ್  31ಕ್ಕೆ ಕೊನೆಗೊಳ್ಳಲಿದೆ. ಈಗಾಗಲೇ ಬ್ಯಾಂಕ್ ಗಳು ಸಾಲ ವಸೂಲಾತಿ ಪ್ರಕ್ರಿಯೆ ಆರಂಭಿಸಿವೆ. ನಿರ್ಬಂಧ ಅವಧಿಯ ವೈಯಕ್ತಿಕ ಸಾಲದ ಮರು ಹೊಂದಾಣಿಕೆ ಮಾಡಿಕೊಂಡಿವೆ. 

ಮುಂದಿನ  ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸಪ್ಟೆಂಬರ್ 1ಕ್ಕೆ ಮುಂದೂಡಿದೆ. 

Leave a Reply

Your email address will not be published. Required fields are marked *

error: Content is protected !!