ನಿಮಗೆ ಯೋಗ್ಯತೆ ಇದೆಯಾ, ನೀವು ಇಲ್ಲಿಂದ ತೊಲಗಿ, ವೈದ್ಯೆಯಿಂದ ಸಚಿವ ಡಾ.ಸುಧಾಕರ್‌ಗೆ ತರಾಟೆ!

ಮೈಸೂರು: ಆರೋಗ್ಯಾಧಿಕಾರಿ ನಾ.ನಾಗೇಂದ್ರ ಅವರ ಆತ್ಮಹತ್ಯೆಗೆ ಹಿರಿಯ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಆರೋಪಿಸಿ, ವೈದ್ಯರು ಕಳೆದ ರಾತ್ರಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಹಿರಿಯ ಅಧಿಕಾರಿಗಳ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಅವರ ಪ್ರಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲು ಆಗಮಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕಳೆ ರಾತ್ರಿ ಆಗಮಿಸಿದ್ದರು.

ಈ ವೇಳೆ ಸುಧಾಕರ್ ಅವರ ವಿರುದ್ಧ ಆಕ್ರೋಶಗೊಂಡ ಮಹಿಳಾ ವೈದ್ಯರೊಬ್ಬರು, ಕೊನೆಗೂ ನಾಗೇಂದ್ರ ಅವರನ್ನು ಸಾಯಿಸಿದ್ದರಲ್ಲಾ, ಸಮಾಧಾನವಾಯಿತಾ, ನಿಮಗೆ ಯೋಗ್ಯತೆ ಇದೆಯಾ…ಛೀ…ಥೂ. ನಿಮಗೆ ಸಾಧ್ಯವಾದರೆ ನಾಗೇಂದ್ರ ಅವರನ್ನು ಬದುಕಿಸಿಕೊಡಿ, ನಿಮ್ಮ 30 ಲಕ್ಷ ಪರಿಹಾರ ಯಾರಿಗೆ ಬೇಕು, ವೈದ್ಯರೆಲ್ಲಾ ಒಂದು ತಿಂಗಳ ಸಂಬಳ ಕೊಟ್ಟರೆ  ಕೋಟಿ ರೂಪಾಯಿ ಆಗುತ್ತದೆ. ನೀವು ಇಲ್ಲಿಂದ ತೊಲಗಿ, ನನ್ನ ಮೇಲೂ ಒತ್ತಡ ಆಗುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.

Leave a Reply

Your email address will not be published. Required fields are marked *

error: Content is protected !!