ಪೀಠೋಪಕರಣದ ಹಣ ಪಾವತಿಸಿ ಎಂದಿದಕ್ಕೆ ಮ‌ನೆಯನ್ನೇ ಬುಲ್ಡೋಜರ್ ನಲ್ಲಿ ಕೆಡವಿದ ಅಧಿಕಾರಿ!

ಲಖನೌ ಜು.17: ಖರೀದಿಸಿದ ವಸ್ತುಗಳ ಹಣ ಪಾವತಿಸುವಂತೆ ಕೇಳಿಕೊಂಡಿದ್ದಕ್ಕೆ ವ್ಯಾಪಾರಿಯ ಮನೆಯ ಒಂದು ಭಾಗವನ್ನು ಬುಲ್ಡೋಜರ್ ಬಳಸಿ ಧ್ವಂಸ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉಪ ವಿಭಾಗೀಯ ಅಧಿಕಾರಿಯಾಗಿದ್ದ ಘನಶ್ಯಾಮ್ ವರ್ಮಾ ಎಂಬವರು ‌ತಮ್ಮ ಮಳಿಗೆಯಿಂದ ಘನಶ್ಯಾಮ್ ಅವರು 2.67 ಲಕ್ಷ ಮೌಲ್ಯದ ಪೀಠೋಪಕರಣ ಖರೀದಿಸಿದ್ದರು. ಆದರೆ ಹಣ ಪಾವತಿಸಿರಲಿಲ್ಲ. ಹಣ ಕೊಡುವಂತೆ ಕೇಳಿದ್ದಕ್ಕೆ ಮನೆ ಒಡೆಯಲು ಅಧಿಕಾರಿ ಆದೇಶಿಸಿದ್ದಾರೆ. ಅದರಂತೆ ಬುಲ್ಡೋಜರ್ ಬಳಸಿ ಮನೆಯ ಒಂದು ಭಾಗವನ್ನು ಧ್ವಂಸ ಮಾಡಿದ್ದಾರೆ ಎಂದು ಮಳಿಗೆಯ ವ್ಯಾಪಾರಿ ಝಹೀದ್ ಅಹ್ಮದ್, ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು.

ಕೃತ್ಯ ಬೆಳಕಿಗೆ ಬರುತ್ತಲೇ ಮೊರಾದಾಬಾದ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಶೈಲೇಂದ್ರ ಕುಮಾರ್ ಸಿಂಗ್, ಅಧಿಕಾರಿಯನ್ನು ಹುದ್ದೆಯಿಂದ ಅಮಾನತು ಮಾಡಿದ್ದಾರೆ.

ಈ ಬಗ್ಗೆ ಮೊರಾದಾಬಾದ್‌ನ ವಿಭಾಗೀಯ ಕಮಿಷನರ್ ಆಂಜನೇಯ ಕುಮಾರ್ ಈ ಕುರಿತು ತನಿಖೆಗೆ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!