ಉಡುಪಿ: ಸಿಟಿ ಬಸ್ ಮಾಲಕ ಜಯದೀಪ್ ನಿಧನ

ಉಡುಪಿ: ಸಿಟಿ ಬಸ್ ಶ್ರೀಸತ್ಯನಾಥ್ ಮೊಟರ್ಸ್‌ನ ಮಾಲಕ ಜಯದೀಪ್ ಹೃದಯಾಘಾತದಿಂದ ನಿಧನ.

ಜಯದೀಪ್‌ರವರಿಗೆ ಇಂದು ಬೆಳಿಗ್ಗೆ ಎದೆ ನೋವು ಕಾಣಿಸಿಕೊಂಡಿತ್ತು, ತಕ್ಷಣ ಮನೆಯವರು ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಅವರು ವೈದ್ಯರ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.

ಮೃತರು ಪತ್ನಿ, ಓರ್ವ ಪುತ್ರ,ಪುತ್ರಿಯನ್ನು ಅಗಲಿದ್ದಾರೆ.

ಹಲವಾರು ವರ್ಷಗಳಿಂದ ಉಡುಪಿ ನಗರದಲ್ಲಿ ಇವರ ಮಾಲಕತ್ವದ ಶ್ರೀ ಸತ್ಯನಾಥ್ ಬಸ್ ಜನರಿಗೆ ಸೇವೆ ನೀಡುತ್ತಿದೆ.

Leave a Reply

Your email address will not be published. Required fields are marked *

error: Content is protected !!