ಪಟಾಕಿ ಸಿಡಿಸಿದ ಹಿನ್ನೆಲೆ ಕಲ್ಲಡ್ಕದಲ್ಲಿ ಬಸ್ಸಿಗೆ ಕಲ್ಲು ತೂರಾಟ

ಮಂಗಳೂರು: ಕಲ್ಲಡ್ಕದಲ್ಲಿ ಬಸ್ಸಿಗೆ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳು. ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ದಾಸಕೋಡಿ ಮತ್ತು ಸೂರಿಕುಮೇರು ಬಳಿ ನಡೆದ ಘಟನೆ. ಉಪ್ಪಿನಂಗಡಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿ ಪರಾರಿಯಾದ ದುಷ್ಕರ್ಮಿಗಳು.

ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗೋ ಸಾಗಾಟ ವಿವಾದ ಸಂಬಂಧ ಕೃತ್ಯ ನಡೆಸಲಾಗಿದೆ ಎಂದು ಶಂಕಿಸಲಾಗಿದೆ. ವಿಟ್ಲದಲ್ಲಿ ಗೋ ಸಾಗಾಟ ವಾಹನ ತಡೆದು ಪಟಾಕಿ ಸಿಡಿಸಿದ್ದ ಹಿಂದೂ ಕಾರ್ಯಕರ್ತರು.

ಪಟಾಕಿ ಸಿಡಿಸಿದ ಹಿನ್ನೆಲೆ ನಿನ್ನೆ ರಾತ್ರಿ ಕಾರ್ಯಕರ್ತರ ಮೇಲೆ ಕೇಸು ದಾಖಲಾಗಿತ್ತು. ಪ್ರಕರಣ ಕುರಿತು ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ದಾಖಲು.

Leave a Reply

Your email address will not be published. Required fields are marked *

error: Content is protected !!