ನೀರಿನ‌ ಮಿತ‌ ಬ‌ಳ‌ಕೆ ಮ‌ತ್ತು ಪ‌ರ‌ಸ್ಪ‌ರ‌ ಸ‌ಹ‌ಕಾರ‌ಕ್ಕೆ ಸ‌0ಸ‌ದೆ ಶೋಭಾ ಮ‌ನ‌ವಿ

ಉಡುಪಿಯಲ್ಲಿ ತಲೆದೋರಿರುವ‌ ಕುಡಿಯುವ‌ ನೀರಿನ ಸಮಸ್ಯೆ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಯೊಂದಿಗೆ ಸ‌0ಸ‌ದೆ ಶೋಭಾ ಕರಂದ್ಲಾಜೆಯವರು ಮಾತುಕತೆ ನಡೆಸಿದ್ದು, ಸಮರೋಪಾದಿಯಾಗಿ ತುರ್ತು ನಿರ್ವ‌ಹಣೆ ಮಾಡುವಂತೆ ಮನವಿ ಮಾಡಲಾಗಿದೆ. ಇಂತಹ ಘಟನೆ ಕರಾವಳಿಯಂತಹ ಭಾಗದಲ್ಲಿ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ನಾಗರಿಕರು ಸಾಧ್ಯವಾದಷ್ಟು ಕಡಿಮೆ ನೀರಿನ ಬಳಕೆ ಮಾಡಿ ಜಿಲ್ಲಾಡಳಿತದೊಂದಿಗೆ ಸಹಕರಿಸಲು ಸಂಸದರು ಮನವಿ ಮಾಡಿದ್ದಾರೆ. ಜಿಲ್ಲೆಯ ಎಲ್ಲಾ ಸಂಘ-ಸಂಸ್ಥೆಗಳು ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಮತ್ತು ಹೆಚ್ಚುವರಿ ನೀರಿರುವ ಬಾವಿಯಿಂದ ನೀರು ಉಪಯೋಗಿಸಲು ಅನುಮತಿ ನೀಡಿ ನೀರಿನ ಸಮಸ್ಯೆ ತಗ್ಗಿಸಲು ಸಹಕರಿಸಬೇಕೆಂದು ಸ‌0ಸ‌ದೆ ಶೋಭಾ ಕರಂದ್ಲಾಜೆಯವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಕುಡಿಯುವ‌ ನೀರಿನ‌ ಸ‌ಮ‌ರ್ಪ‌ಕ‌ ಪೂರೈಕೆಗೆ ಬ‌ಜೆ ಜ‌ಲಾಶ‌ಯ‌ದ‌ ಬ‌ಳಿ ಸ್ವ‌ರ್ಣಾ ನ‌ದಿಯ‌ಲ್ಲಿದ್ದ‌ ಅಡೆ ತ‌ಡೆಗ‌ಳ‌ ನಿವಾರ‌ಣೆಗಾಗಿ ನ‌ಗ‌ರ‌ಸ‌ಭಾ ಸ‌ದ‌ಸ್ಯ‌ರು, ನಾಗ‌ರಿಕ‌ರು ಮ‌ತ್ತು ಕಾರ್ಯ‌ಕ‌ರ್ತ‌ರ‌ನ್ನು ಒಗ್ಗೂಡಿಸಿ ಸ್ವ‌ತ: ಶ್ರ‌ಮ‌ದಾನ‌ದ‌ಲ್ಲಿ ತೊಡ‌ಗಿಸಿಕೊ0ಡು ಸ‌ಮ‌ಸ್ಯೆ ಪ‌ರಿಹ‌ರಿಸ‌ಲು ವಿಶೇಷ‌ ಪ್ರ‌ಯ‌ತ್ನ‌ ನ‌ಡೆಸುತ್ತಿರುವ‌ ಉಡುಪಿ ಶಾಸ‌ಕ‌ ಕೆ.ರ‌ಘುಪ‌ತಿ ಭ‌ಟ್ ಮ‌ತ್ತು ಸ‌ಹ‌ಕ‌ರಿಸುತ್ತಿರುವ‌ ಎಲ್ಲ‌ರ‌ನ್ನೂ ಸ‌0ಸ‌ದೆ ಶೋಭಾ ಕ‌ರ‌0ದ್ಲಾಜೆ ಅಭಿನ‌0ದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!