ಸಸಿಹಿತ್ಲು ನಾಪತ್ತೆಯಾಗಿದ್ದವನ ಶವ ಪತ್ತೆ

ಮುಲ್ಕಿ : ಕಳೆದ ಭಾನುವಾರ ಇಲ್ಲಿನ ಸಸಿಹಿಟ್ಲು ಬಳಿಯಲ್ಲಿ ನಡೆದ ಕೆಸರುಗದ್ದೆ ಕ್ರೀಡಾಕೂಟಕ್ಕೆ ಭಾಗವಹಿಸಲು ಬಂದಿದ್ದ ಕಾವೂರು ನಿವಾಸಿ ಗುರುಪ್ರಸಾದ್ ತನ್ನ ಸ್ನೇಹಿತರೊಂದಿಗೆ ಈಜಲೆಂದು ಸಮುದ್ರಕ್ಕೆ ಇಳಿದಿದ್ದು ಸೆರೆಯ ಸೆಳೆತಕ್ಕೊಳಗಾಗಿ ಸಮುದ್ರ ಪಾಲಾಗಿದ್ದರು ಅವರ ಶವವೂ ಸುರತ್ಕಲ್ ಬಳಿಯ ಮಾಲೆಮಾರ್ ಬೀಚಿನಲ್ಲಿ ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ.
ಗುರುಪ್ರಸಾದ್ ಇವರೊಂದಿಗೆ ಸುಚಿತ್ ಸಹ ಸಮುದ್ರ ಪಾಲಾಗಿದ್ದು ಆತನ ಶವ ಸೋಮವಾರ ಪತ್ತೆಯಾಗಿತ್ತುಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿಸಲಾಗಿದೆ

Leave a Reply

Your email address will not be published. Required fields are marked *

error: Content is protected !!