ಮಾಜಿ ಶಾಸಕ ಗೋಪಾಲ ಭಂಡಾರಿಯವರ ಅಂತಿಮ ದರ್ಶನ ಪಡೆದ ಗಣ್ಯರು

ಕಾರ್ಕಳದ ಮಾಜಿ ಶಾಸಕ ಗೋಪಾಲ ಭಂಡಾರಿಯವರು ನಿಧನರಾದ ಹಿನ್ನಲೆಯಲ್ಲಿ ಭಂಡಾರಿಯವರ ಹುಟ್ಟೂರಾದ ಹೆಬ್ರಿಯಲ್ಲಿ ಸ್ವಯಂಪ್ರೇರಿತ ಬಂದ್ ನಡೆಸಲಾಯಿತು. ಅಂಗಡಿ,ಹೋಟೇಲ್‌ಗಳು, ಮೆಡಿಕಲ್‌ಗಳು, ಪೆಟ್ರೋಲ್ ಬಂಕ್‌ಗಳು ಬಂದ್ ಮಾಡಿದ್ದು ಹೆಬ್ರಿಯ ಜನತೆ ಅಗಲಿದ ಮಾಜಿ ಶಾಸಕರಿಗೆ ಈ ಮೂಲಕ ಗೌರವ ಸಲ್ಲಿಸಿದರು.

ಈ ವೇಳೆ ಹೆಬ್ರಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಭಿಮಾನಿಗಳಿಗೆ ಅಂತಿಮದರ್ಶನಕ್ಕೆ ಅನುವುಮಾಡಿಕೊಟ್ಟಿದ್ದು ತದನಂತರ ಪಾರ್ಥೀವ ಶರೀರವನ್ನು ಮೃತರ ಸ್ವಗೃಹಕ್ಕೆ ಕೊಂಡೋಯ್ಯಲಾಯಿತು.

ಈ ವೇಳೆ ಸಚಿವ ಯುಟಿ ಖಾದರ್,ಶಾಸಕ ಲಾಲಾಜಿ ಮೆಂಡನ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ , ವಿಧಾನಪರಿಷತ್ ಸಭಾಪತಿಗಳಾದ ಪ್ರತಾಪ್ ಚಂದ್ರ ಶೆಟ್ಟಿ, ಹಿರಿಯ ರಾಜಕಾರಣಿ ಎ.ಜಿ.ಕೊಡ್ಗಿ, ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ, ಮುನಿಯಾಲು ಉದಯ ಶೆಟ್ಟಿ ಮುಂತಾದ ಗಣ್ಯರು ಅಂತಿಮ ದರ್ಶನ ಪಡೆದರು.

Leave a Reply

Your email address will not be published. Required fields are marked *

error: Content is protected !!