ಮೋಸ ಮಾಡಿದವರನ್ನು ಫಾಲೋ ಮಾಡಲ್ಲ- ರಾಮಲಿಂಗ ರೆಡ್ಡಿ ವಿರುದ್ಧ ಅತೃಪ್ತರ ಕಿಡಿ

ಮುಂಬೈ: ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ವಾಪಸ್ ಪಡೆದು ನಮಗೆ ಮೋಸ ಮಾಡಿದ್ದಾರೆ. ನಾವು ಮಾತ್ರ ಯಾವುದೇ ಕಾರಣಕ್ಕೂ ಅವರನ್ನು ಫಾಲೋ ಮಾಡಲ್ಲ ಎಂದು ಮುಂಬೈನಿಂದ ಬೆಂಗಳೂರಿನ ಅತೃಪ್ತ ಶಾಸಕರಾದ ಎಸ್. ಟಿ ಸೋಮಶೇಖರ್, ಮುನಿರತ್ನ, ಬೈರತಿ ಬಸವರಾಜು ತಿರುಗೇಟು ನೀಡಿದ್ದಾರೆ.

ಮುಂಬೈ ರೆಸಾರ್ಟಿನಿಂದ ಸಂದೇಶ ರವಾನಿಸಿರುವ ಅತೃಪ್ತ ಶಾಸಕರು ರಾಮಲಿಂಗಾರೆಡ್ಡಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ವಾಪಾಸ್ ಪಡೆಯುತ್ತಿದ್ದೇನೆ. ಸದನಕ್ಕೆ ಹಾಜರಾಗಿ ವಿಶ್ವಾಸಮತಯಾಚನೆ ವೇಳೆ ಮತ ಹಾಕುತ್ತೇನೆ ಎಂದಿರುವ ಬಗ್ಗೆ ನಾವು ಮಾಧ್ಯಮಗಳಲ್ಲಿ ನೋಡಿದ್ದೇವೆ. ರಾಜೀನಾಮೆ ನೀಡುವ ಮೊದಲು ನಾವು ನಾಲ್ಕು ಮಂದಿ ಅಂದರೆ ಎಸ್. ಟಿ ಸೋಮಶೇಖರ್, ಮುನಿರತ್ನ, ಬೈರತಿ ಬಸವರಾಜು ಹಾಗೂ ರಾಮಲಿಂಗಾರೆಡ್ಡಿ ಸೇರಿ ಒಟ್ಟಾಗಿ ಕುಳಿತು ಮಾತನಾಡಿ, ಒಂದು ಸಾರಿ ರಾಜೀನಾಮೆ ಕೊಟ್ಟ ನಂತರ ಯಾವುದೇ ಕಾರಣಕ್ಕೂ ಅದನ್ನು ವಾಪಾಸ್ ಪಡೆಯಬಾರದು ಎಂಬ ಒಪ್ಪಂದದ ಮೇರೆಗೆ ನಿರ್ಧಾರ ತೆಗೆದುಕೊಂಡಿದ್ದೆವು ಎಂದು ತಿಳಿಸಿದರು.

ಅನೇಕ ಬಾರಿ, ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ವಾಪಸ್ ಪಡೆಯುವುದಿಲ್ಲ. ನನ್ನ ಮೇಲೆ ನೂರಕ್ಕೆ ನೂರು ವಿಶ್ವಾಸವಿಡಿ ಎಂದು ರಾಮಲಿಂಗರೆಡ್ಡಿ ಅವರು ಹೇಳಿದ್ದರು. ಆದ್ರೆ ಈಗ ರಾಜೀನಾಮೆ ವಾಪಸ್ ಪಡೆದು ನಮಗೆ ಮೋಸ ಮಾಡಿದ್ದಾರೆ. ನಾವು ರಾಮಲಿಂಗಾರೆಡ್ಡಿಯನ್ನು ಫಾಲೋ ಮಾಡಲ್ಲ ಎಂದು ಅತೃಪ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!