ಮುನಿಯಾಲು: ಚಿರತೆ ಸೆರೆಹಿಡಿದ ಗ್ರಾಮಸ್ಥರು

ಕಾರ್ಕಳ: ಕಳೆದ ಹಲವು ತಿಂಗಳಿನಿಂದ ನಾಯಿ,ಬೆಕ್ಕು, ಕೋಳಿ ಹಾಗೂ ಕರುಗಳನ್ನು ಹೊತ್ತೊಯ್ಯುತ್ತಿದ್ದ ಚಿರತೆಯನ್ನು ಗ್ರಾಮಸ್ಥರು ಸೇರಿ ಸೆರೆಹಿಡಿದಿದ್ದಾರೆ.ಕಾರ್ಕಳ ತಾಲೂಕಿನ ಕಾಡುಹೊಳೆ ಹಳೆಮನೆ ಎಂಬಲ್ಲಿನ ಆನಂದ ಪ್ರಭು ಎಂಬವರ ಹಟ್ಟಿಗೆ ಬುಧವಾರ ತಡರಾತ್ರಿ ನುಗ್ಗಿದ ಚಿರತೆ 15 ದಿನಗಳ ಎಳೆಕರುವನ್ನು ಕೊಂದು ಅರ್ಧತಿಂದು ಪರಾರಿಯಾಗಿದೆ.

ಇದಲ್ಲದೇ ವರಂಗ ಗ್ರಾಮದ ಪಟ್ರಬೆಟ್ಟು ಕುಮಾರ ಪೂಜಾರಿ ಎಂಬವರ ಮನೆಯ ಕೋಳಿಗೂಡಿಗೆ ನುಗ್ಗಿದ ಚಿರತೆ ಕೋಳಿಗಳನ್ನು ತಿನ್ನಲು ಮುಂದಾದಾಗ ಅವುಗಳ ಕಿರುಚಾಟದಿಂದ ಎಚ್ಚೆತ್ತ ಮನೆಮಂದಿ ಧೈರ್ಯದಿಂದ ಕಬ್ಬಿಣದ ಗೂಡಿನೊಳಗೆ ನುಗ್ಗಿದ್ದ ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶ್ವಸಿಯಾಗಿದ್ದರು. ಇದಾದ ಬಳಿಕ ಮುಂಜಾನೆ ಅರಣ್ಯಾಧಿಕಾರಿಗಳೂ ಸ್ಥಳಕ್ಕೆ ಧಾವಿಸಿ ಬೋನು ಬಳಸಿ ಚಿರತೆಯನ್ನು ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!