ಅಕ್ರಮ ಮರಳು ಸಾಗಾಟ- 1 ಜೆ.ಸಿ.ಬಿ, ಮರಳು ತುಂಬಿದ 3 ಟಿಪ್ಪರ್ ಪೊಲೀಸರ ವಶ

ಮಂಗಳೂರು : ನೇತ್ರಾವತಿ ಅಕ್ರಮ ಮರಳು ಸಾಗಾಟ ಕುರಿತು ಖಚಿತ ಮಾಹಿತಿ ಮೇರೆಗೆ ಮರಳು ಅಡ್ಡಕ್ಕೆ ದಾಳಿಯಿಟ್ಟ ಮಂಗಳೂರು ಗ್ರಾಮಾಂತರ ಪೋಲಿಸರು. ಅಡ್ಯಾರು ಗ್ರಾಮದ ಸುರೇಂದ್ರ ಎಂಬವರಿಗೆ ಸೇರಿದ ಮರಳು ದಕ್ಕೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಮರಳು ಸಾಗಾಟ ಮಾಡಲಾಗುತ್ತಿತ್ತು.

ನೇತ್ರಾವತಿ ನದಿ ತೀರದಿಂದ ಮರಳನ್ನು ಅಕ್ರಮವಾಗಿ ಜೆಸಿಬಿ ಯಂತ್ರದ ಮೂಲಕ ಟಿಪ್ಪರ್‌ಗೆ ತುಂಬಿಸಿ ಸಾಗಾಟ ಮಾಡಲಾಗುತ್ತಿತ್ತು. ದಾಳಿ ನಡೆಸಿದ ಪೋಲಿಸರು, 1 ಜೆ.ಸಿ.ಬಿ, ಮರಳು ತುಂಬಿದ 3 ಟಿಪ್ಪರ್ ಲಾರಿ ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!