ಉರುಳಿ ಬಿದ್ದ ಅನಿಲ ತುಂಬಿದ ಟ್ಯಾಂಕರ್ – ಆತಂಕದ ವಾತಾವರಣ

ಉಡುಪಿ: ಅನಿಲ ತುಂಬಿದ ಗ್ಯಾಸ್ ಟ್ಯಾಂಕರ್ ಒಂದು ಬಲೈಪಾದೆ ಬಳಿ ಉರುಳಿಬಿದ್ದು ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ . ಇಂದು ಬೆಳಿಗ್ಗೆ 5 ಗಂಟೆ ಮಂಗಳೂರಿನಿಂದ ಬೆಳಗಾಂ ಕಡೆಗೆ ಅಡುಗೆ  ಅನಿಲ ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಗೆ ಡೀಸೆಲ್‌  ಹಾಕಲೆಂದು ರಾಷ್ಟ್ರೀಯ ಹೆದ್ದಾರಿ ಬಲಾಯಿಪಾದೆ ಯಿಂದ ಉದ್ಯಾವರ ಕಡೆ ಟ್ಯಾಂಕರ್ ನ್ನು ತಿರುಗಿಸುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ನಡೆದಿದೆ .

ಟ್ಯಾಂಕರ್ ಚಾಲಕ ಬಲಾಯಿ ಪಾದೆ ಬಳಿ ಯು ಟರ್ನ್ ಮಾಡಿ ಮತ್ತೆ ಮಂಗಳೂರು ಕಡೆ ಹೋಗುವ ದಾರಿಯಲ್ಲಿ ಉದ್ಯಾವರ ಪೆಟ್ರೋಲ್ ಪಂಪ್ ಗೆ ಹೋಗಲು ತಿರುಗಿಸಿದಾಗ ಟ್ಯಾಂಕರ್ ಉರುಳಿಬಿದ್ದಿದೆ. ಘಟನೆ ಯಲ್ಲಿ ಚಾಲಕ ಆಯಿವುದ್ದೀನ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.ಗ್ಯಾಸ್ ತುಂಬಿದ ಟ್ಯಾಂಕರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿಬಿದ್ದ ಪರಿಣಾಮ ಸ್ಥಳದಲ್ಲಿ ಆತಂಕದ ವಾತವಾರಣ ನಿರ್ಮಾಣವಾಗಿದೆ.

ಅಗ್ನಿಶಾಮಕದಳ  , ಉಡುಪಿ ‌ನಗರಠಾಣೆ ಪೊಲೀಸ್ ಆಗಮಿಸಿದ್ದಾರೆ.
ಮಂಗಳೂರು ಕಡೆ ಹೋಗುವ ವಾಹನವನ್ನು ಏಕಪಥ ರಸ್ತೆಯಲ್ಲಿ ಪೊಲೀಸರು ಕಳುಹಿಸುತ್ತಿದ್ದಾರೆ. 

Leave a Reply

Your email address will not be published. Required fields are marked *

error: Content is protected !!