ಬಂಟ್ವಾಳ: ಪಂಚಾಯತ್ ಸದಸ್ಯ, ಪತ್ನಿ ಮೇಲೆ ತಲವಾರು ದಾಳಿ- ಕೊಲೆಗೆ ವಿಫಲ ಯತ್ನ

ಬಂಟ್ವಾಳ: ರೌಡಿಶೀಟರ್ ವೊಬ್ಬ ಅತನ ಸಹಚರರೊಂದಿಗೆ ಬೆಳ್ಳಂಬೆಳ್ಳಗೆ ಮನೆಯೊಂದಕ್ಕೆ ನುಗ್ಗಿ  ತಾಲೂಕಿನ ಮೇರಮಜಲು ಎಂಬಲ್ಲಿ  ಗ್ರಾಮ ಪಂಚಾಯತ್ ಸದಸ್ಯ ಹಾಗೂ ಅತನ ಪತ್ನಿಯ ಮೇಲೆ  ತಲವಾರಿನಿಂದ ದಾಳಿ   ನಡೆಸಿ ಕೊಲೆಗೆ ವಿಫಲ ಯತ್ನ ನಡೆಸಿದ ಘಟನೆ ಶುಕ್ರವಾರ ನಡೆದಿದೆ. 

 ಮೇರೆಮಜಲು ನಿವಾಸಿ, ಪಂಚಾಯತ್ ಸದಸ್ಯ ಯೋಗೀಶ್ ಪ್ರಭು ಮತ್ತು ಆತನ ಪತ್ನಿ ಶೋಭಾ ಅವರು ತಲವಾರು ದಾಳಿಯಿಂದ  ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮೇರೆಮಜಲು ನಿವಾಸಿ, ರೌಡಿಶೀಟರ್ ಪ್ರಸಾದ್ ಬೆಳ್ಚಡ ಮತ್ತು ಆತನ  ಇಬ್ಬರು ಸಹಚರರು ಈ ಕೃತ್ಯ ನಡೆಸಿದ್ದಾರೆ ಎಂದು ಗಾಯಾಳು ಯೋಗೀಶ್ ಪ್ರಭು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.ಮುಂಜಾನೆ ಸುಮಾರು 4 ಗಂಟೆಯ ವೇಳೆಗೆ ಆರೋಪಿಗಳು ಯೋಗೀಶ್ ಪ್ರಭು ಅವರ ಮನೆಯ ಮುಂಭಾಗದ   ಬಾಗಿಲು ಬಡಿದಿದ್ದರು,ತಕ್ಷಣ ನಿದ್ದೆಯಿಂದ ಎಚ್ಚೆತ್ತು ಯಾರೆಂದು ನೋಡಲು ಬಾಗಿಲು ತೆರೆಯುತ್ತಿದ್ದಂತೆ ಮನೆಯೊಳಗೆ ನುಗ್ಗಿದ ಆರೋಪಿಗಳು ಏಕಾಏಕಿ  ಯೋಗೀಶ್ ಪ್ರಭು ಮೇಲೆ ತಲವಾರಿನಿಂದ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಡ್ಡಬಂದ ಅವರ ಪತ್ನಿ ಶೋಭಾರಿಗೂ ಹಲ್ಲೆಗೈಯಲಾಗಿದೆ ಎಂದು ತಿಳಿದು ಬಂದಿದೆ.

ಘಟನೆಗೆ ಕಾರಣ ತಿಳಿದು ಬಂದಿಲ್ಲ.ಸುದ್ದಿ ತಿಳಿಯುತ್ತಿದ್ದಂತೆ  ಘಟನಾ ಸ್ಥಳಕ್ಕೆ ಬಂಟ್ವಾಳ ಎ‌.ಎಸ್.ಪಿ.ಸೈದುಲು ಅಡಾವತ್,  ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್, ಗ್ರಾಮಾಂತರ ಎಸ್.ಐ.ಪ್ರಸನ್ನ ಹಾಗೂ ಸಿಬ್ಬಂದಿ ಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದ್ದು,ಮುಂದಿನ ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!