ಕಲ್ಸಂಕ ರಿಕ್ಷಾ ನಿಲ್ದಾಣದ ಮೇಲ್ಚಾವಣಿ, ಸೋಲಾರ್ ದೀಪ ಉದ್ಘಾಟನೆ
![](https://udupitimes.com/wp-content/uploads/2024/03/IMG-20240312-WA0070-1024x768.jpg)
ಉಡುಪಿ ಮಾ.11(ಉಡುಪಿ ಟೈಮ್ಸ್ ವರದಿ): ಕಲ್ಸಂಕ ರಿಕ್ಷಾ ಚಾಲಕರ ಮಾಲಕರ ಸಂಘದ ವತಿಂದ ನಿರ್ಮಿಸಲಾದ ರಿಕ್ಷಾ ನಿಲ್ದಾಣದ ಮೇಲ್ಚಾವಣಿ ಮತ್ತು ಸೋಲಾರ್ ದೀಪ ಉದ್ಘಾಟನಾ ಕಾರ್ಯಕ್ರಮ ಸೋಮವಾರ ನಡೆಯಿತು.
![](https://udupitimes.com/wp-content/uploads/2024/03/IMG-20240312-WA0068-1024x682.jpg)
ದಾನಿಗಳಿಂದ ನಿರ್ಮಿಸಲಾದ ರಿಕ್ಷಾ ನಿಲ್ದಾಣದ ಮೇಲ್ಚಾವಣಿಯನ್ನು ಹಾಗೂ ಯಶೋಧ ಆಟೋ ಚಾಲಕರ ಮಾಲಕರ ಸಂಘ ಇದರ ಜಿಲ್ಲಾಧ್ಯಕ್ಷರಾದ ಕೆ ಕೃಷ್ಣಮೂರ್ತಿ ಆಚಾರ್ಯ ರವರ ಮುತುವರ್ಜಿಯಿಂದ ಕೊಡುಗೆಯಾಗಿ ನೀಡಿದ ಸೋಲಾರ್ ದೀಪವನ್ನು ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಯಶ್ಪಾಲ್ ಸುವರ್ಣ ಅವರು ಉದ್ಘಾಟಿಸಿದರು
![](https://udupitimes.com/wp-content/uploads/2024/03/IMG-20240312-WA0067-1-1024x682.jpg)
ಈ ವೇಳೆ ನಿಲ್ದಾನದ ಹಳೆಯ ರಿಕ್ಷಾ ಚಾಲಕರನ್ನು ಗುರುತಿಸಿ ಸನ್ಮಾನಿಸಲಾಯಿತು.
![](https://udupitimes.com/wp-content/uploads/2024/03/IMG-20240312-WA0069-1024x682.jpg)
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಂಡವಿ ಡೆವಲಪರ್ಸ್ ನ ಡಾ. ವಿನ್ಸೆಂಟ್ ಜೆರ್ರಿ ಡಯಾಸ್, ಉಡುಪಿ ನಗರ ಸಭಾ ಪೌರಾಯುಕ್ತ ರಾಯಪ್ಪ, ಉಡುಪಿ ಸಂಚಾರ ಠಾಣೆಯ ಸಬ್ ಇನ್ಸ್ಪೆಕ್ಟರ್ ಸುದರ್ಶನ್ ದೊಡ್ಮಣಿ, ಸಗರ ಸಭಾ ಸದಸ್ಯೆ ಮಾನಸ ಚಿದಾನಂದ ಪೈ, ಸಿಲಾ ಎಡ್ವರ್ಟೈಸರ್ಸ್ ಮಂಗಳೂರು ಇದರ ವಾಲ್ಟರ್ ಮೊಂಟೆರೋ, ಆಟೋರಿಕ್ಷಾ ಚಾಲಕ ಮಾಲಕರ ಸೊಸೈಟಿ ಉಡುಪಿ ಇದರ ಅಧ್ಯಕ್ಷ ಶ್ರೀಧರ್, ಶ್ರೀ ಮಹಿಷಮರ್ದಿನಿ ಲ್ಯಾಂಡ್ ಲಿಂಕ್ಸ್ ಕಡಿಯಾಳಿ ಇದರ ಭಾಸ್ಕರ್ ಶೇರಿಗಾರ್, ಕಲ್ಸಂಕ ಚಾಲಕರ ಮಾಲಕ ಸಂಘದ ಅಧ್ಯಕ್ಷ ಸದಾನಂದ ಸುವರ್ಣ, ಉಪಾಧ್ಯಕ್ಷ ಗಣೇಶ್ ಸುವರ್ಣ, ಕಾರ್ಯದರ್ಶಿ ಸುನಿಲ್ ಬೈಲಕೆರೆ ಹಾಗೂ ಸರ್ವ ಸದಸ್ಯರು ಮತ್ತು ಯಶೋಧ ಆಟೋ ಚಾಲಕರು ಮತ್ತು ಮಾಲಕರ ಸಂಘ ಉಡುಪಿ ಇದರ ಸರ್ವಸದಸ್ಯರು ಹಾಗೂ ಎಲ್ಲಾ ನಿಲ್ದಾಣದ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.