ಕರ್ನಾಟಕ ಜಾನಪದ ಪರಿಷತ್ತು, ಉಡುಪಿ ಜಿಲ್ಲಾ ಘಟಕಗಳ ಅಧ್ಯಕ್ಷರುಗಳ ಪದಗ್ರಹಣ

“ಕರ್ನಾಟಕ ಜಾನಪದ ಪರಿಷತ್ತು, ಉಡುಪಿ ಜಿಲ್ಲಾ ಘಟಕದ ಉದ್ಘಾಟನೆ ಇದೇ ೧೬ ಜೂನ್ ರಂದು ಮಧ್ಯಾಹ್ನ 2 ಗಂಟೆಯಿಂದ ಎಮ್.ಜಿ.ಎಮ್ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ವತಿಯಿಂದ ಉಡುಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಹಾಗೂ ತಾಲೂಕು ಘಟಕಗಳ ಅಧ್ಯಕ್ಷರುಗಳ ಪದಗ್ರಹಣ ಸಮಾರಂಭ ಮತ್ತು ಜಿಲ್ಲೆಯ ಜಾನಪದ ವೈಭವದ ಅನಾವರಣ.

ಪ್ರಖ್ಯಾತ ಸಮಾಜ ಸೇವಕ , ಕಲಾಸಕ್ತ, ಲಯನ್ಸ್ ನಾಯಕರಾದ ಡಾ. ತಲ್ಲೂರ್ ಶಿವರಾಮ ಶೆಟ್ಟಿ ಯವರು ಇದರ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಡುಪಿ ಜಿಲ್ಲೆಯ ಶ್ರೀಮಂತ ಜಾನಪದ ಕ್ಷೇತ್ರದಲ್ಲಿ ಈಗಾಗಲೇ ಹಲವಾರು ಸಂಘ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಈ ಎಲ್ಲ ಕೆಲಸಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು , ಒಗ್ಗಟ್ಟಿನಿಂದ ಬೆಳೆಯುವ ನಿಟ್ಟಿನಲ್ಲಿ ವೇದಿಕೆಯಾಗಿ ಉಡುಪಿ ಜಾನಪದ ಪರಿಷತ್ತು ಕೆಲಸ ಮಾಡಲಿದೆ.

ಜಾನಪದ ಕಲಾ ಪ್ರದರ್ಶನ ಕಾರ್‍ಯಕ್ರಮಕ್ಕೆ ಆದರದ ಸ್ವಾಗತ ಬಯಸುವವರು ಕರ್ನಾಟಕ ಜಾನಪದ ಪರಿಷತ್ ನ ಅಧ್ಯಕ್ಷರಾದ ಡಾ. ತಲ್ಲೂರ್ ಶಿವರಾಮ ಶೆಟ್ಟಿ,ಕಾರ್ಯದರ್ಶಿಶ್ರೀ ಸುನಿಲ್ ಕುಮಾರ್ ಶೆಟ್ಟಿ ಹಾಗೂ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ನೇರಿ ಕರ್ನೇಲಿಯೊ ಬ್ರಹ್ಮಾವರ.

2 thoughts on “ಕರ್ನಾಟಕ ಜಾನಪದ ಪರಿಷತ್ತು, ಉಡುಪಿ ಜಿಲ್ಲಾ ಘಟಕಗಳ ಅಧ್ಯಕ್ಷರುಗಳ ಪದಗ್ರಹಣ

  1. ಅನ್ಯಾಯದ ವಿರುದ್ಧದ ಸ್ವರ ನಿಮ್ಮದಾಗಲಿ.
    ಜನಸಾಮಾನ್ಯರಿಗೆ ತೊಂದರೆ ಆಗುವ ವಿಷಯ ನಿಮ್ಮ ಚಾನೆಲ್ ನಲ್ಲಿ ಮೂಡಿಬರಲಿ.
    ಸರಕಾರದ ಕಾನೂನಿಗೂ ಮತ್ತು ಇಲ್ಲಿ ನಡೆಸುವಾ ಅಧಿಕಾರಿಗಳ ಕಾನೂನಿನ ನಡುವಿನ ವ್ಯತ್ಯಾಸವನ್ನು ನಿಮ್ಮ ಚಾನಲ್ ಮೂಡಿಬರಲಿ.

Leave a Reply

Your email address will not be published. Required fields are marked *

error: Content is protected !!