ಉಡುಪಿ: ಕಡಿಯುತ್ತಿದ್ದ ಮರ ಮೈಮೇಲೆ ಬಿದ್ದು ಕಾರ್ಮಿಕ ಸಾವು

ಉಡುಪಿ ಸೆ.14(ಉಡುಪಿ ಟೈಮ್ಸ್ ವರದಿ): ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಕಲ್ಸಂಕ ಬಳಿ ಮರ ಕಡಿಯುತ್ತಿದ್ದ ವೇಳೆ ಮರವು ತುಂಡಾಗಿ ಮೈಮೇಲೆ ಬಿದ್ದು ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ನಿನ್ನೆ ಬೆಳಿಗ್ಗೆ ನಡೆದಿದೆ.

ಬಾಗಲಕೋಟೆ ಮೂಲದ ಕೂಲಿ ಕಾರ್ಮಿಕರ ಸುರೇಶ ಸಂದಿಮನಿ (32) ಮೃತಪಟ್ಟವರು.

ನಿನ್ನೆ ಬೆಳಿಗ್ಗೆ ಸುನೀಲ್‌ ಎಂಬವರು ಸುರೇಶ ಸಂದಿಮನಿ ರವರನ್ನು ಕೆಲಸಕ್ಕೆಂದು ಕರೆದುಕೊಂಡು ಹೋಗಿದ್ದು, ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಕಲ್ಸಂಕ ಬಳಿ ಮರವನ್ನು ಕಡಿಯುತ್ತಿದ್ದ ವೇಳೆ, ಮರವು ತುಂಡಾಗಿ ಸುರೇಶ ಸಂದಿಮನಿ ಅವರ ಮೈಮೇಲೆ ಬಿದ್ದು, ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು  ಅಜ್ಜರಕಾಡು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಆಪಾದಿತರಾದ ಸುನೀಲ್‌ ಮತ್ತು ಜಾಗದ ಮಾಲಕ ಪ್ರಭಾಕರ ಸಾಲ್ಯಾನ್‌ ರವರು ಯಾವುದೇ ಸುರಕ್ಷಾ ಕವಚವನ್ನು ನೀಡದೇ ನಿರ್ಲಕ್ಷ ವಹಿಸಿ ಮರ ಕಡಿಸಿದ್ದು, ಅವರ ನಿರ್ಲಕ್ಷತನವೇ ಸುರೇಶ ಸಂದಿಮನಿ ರವರ ಸಾವಿಗೆ ಕಾರಣವಾಗಿದೆ ಎಂದು ಮೃತರ ತಮ್ಮ ಹನುಮಂತ ಎಂಬವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!