ಅಂದು ಗೋಲಿಬಾರ್ ಇಂದು ಲಾಠಿಚಾರ್ಜ್ – ಇದೇ ಯಡಿಯೂರಪ್ಪ ಆಡಳಿತ : ಯೋಗೀಶ್ ಶೆಟ್ಟಿ

ಉಡುಪಿ: ಅಂದು ಗೋಲಿಬಾರ್ ಇಂದು ಲಾಠಿಚಾರ್ಜ್. ಇದೇ ಯಡಿಯೂರಪ್ಪ ಅವರ ಆಡಳಿತ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ದೂರಿದ್ದಾರೆ. ಇಂದು ಉತ್ತರ ಕರ್ನಾಟಕ ಭಾಗಶಃ ಮುಳುಗಡೆ ಆಗಿದ್ದು ಮುಖ್ಯಮಂತ್ರಿ ಅವರ ಗದಗ ದ  ನಡವಳಿಕೆ ನಾಚಿಕೆ ಗೇಡಿನ ಸಂಗತಿ.

ಪ್ರವಾಹ ಅದ ಮೊದಲ ದಿನದಿಂದ ಸ್ಪಂದಿಸದ ಮುಖ್ಯಮಂತ್ರಿ ಗಳು ತಮ್ಮ ರಾಜಕೀಯ ಮೇಲಾಟಕ್ಕೆ ದೆಹಲಿಯಲ್ಲಿ ಕೂತಿದ್ದರು. ತಡವಾಗಿ ಬುದ್ದಿ ಬಂದು ಬಂದರಾದರೂ ತಮ್ಮ ಅದಿಕಾರ ದ ದರ್ಪ್ವ ವನ್ನು ಬಿಡಲಿಲ್ಲ. ಹಿಂದೆ 2008 ರಲ್ಲಿ ಮುಖ್ಯಮಂತ್ರಿ ಆದಾಗ ಹಾವೇರಿಯಲ್ಲಿ ಗೊಬ್ಬರ ಕೇಳಲು ಬಂದ ರೈತರ ಮೇಲೆ ಗೋಲಿಬಾರ್ ಮಾಡಿದ್ದರು.

ಇದೀಗ ಗದಗ ದಲ್ಲಿ ಪ್ರವಾಹ ಪೀಡಿತರು ಅನ್ನ ನೀರು ಕೇಳಲು ಬಂದರೆ ಅವರ ಮೇಲೆ ಲಾಠಿ ಚಾರ್ಜ್.. ಏನಿದು ಯಡಿಯೂರಪ್ಪ ಅವರು ಸರ್ವಾಧಿಕಾರಿ ರೀತಿಯಲ್ಲಿ ನಡೆದುಕೊಂಡು ಬರುತ್ತಿದ್ದಾರೆ ಎಂದು ದೂರಿದರು.

ಅದೇ ಕಳೆದ ವರ್ಷ ಕೊಡಗಿನಲ್ಲಿ  ಪ್ರವಾಹ ಬಂದಾಗ ಆಗಿನ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಅವರು ನಡೆದುಕೊಂಡ ರೀತಿಯನ್ನು ನೆನೆಸಿಕೊಳ್ಳಬೇಕು. ಅದು ನಿಜಕ್ಕೂ ಮಾದರಿ ಎಂದರು. ಈಗ ಕುಮಾರಸ್ವಾಮಿ ಅವರು  ಮಾಜಿ ಆದರೂ ತೀವ್ರ ಜ್ವರದ ನಡುವೆ ಇಂದು ಬೆಳಗಾವಿ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿಜಕ್ಕೂ ಅವರ ಜನಪರ ಕಾಳಜಿಯನ್ನು ತೋರಿಸುತ್ತದೆ.

Leave a Reply

Your email address will not be published. Required fields are marked *

error: Content is protected !!