ಸಾರ್ವಜನಿಕ ಬಾಲ ಗಣೇಶೋತ್ಸವ ಸಮಿತಿ : ರಜತ ಮಹೋತ್ಸವದ ಅಧ್ಯಕ್ಷರಾಗಿ ಯೋಗೀಶ್ ಕೋಟ್ಯಾನ್

ಉದ್ಯಾವರ ಗ್ರಾಮದ ಆಸುಪಾಸಿನಲ್ಲಿ ಸಾಮಾಜಿಕ ಸಾಂಸ್ಕೃತಿಕ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡುತ್ತಿರುವ ಆರೂರು ತೋಟ ಫ್ರೆಂಡ್ಸ್ ಗಾರ್ಡನ್ ಸಾರ್ವಜನಿಕ ಬಾಲ ಗಣೇಶೋತ್ಸವ ಸಮಿತಿ ರಜತ ಮಹೋತ್ಸವದ ಸಂಭ್ರಮದಲ್ಲಿದೆ. ಉದ್ಯಾವರ ಕಂಪನಬೆಟ್ಟು ಬಬ್ಬುಸ್ವಾಮಿ ದೇವಸ್ಥಾನದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸಾರ್ವಜನಿಕ ಬಾಲ ಗಣೇಶೋತ್ಸವ ಸಮಿತಿಯ ರಜತಮಹೋತ್ಸವದ ಅಧ್ಯಕ್ಷರಾಗಿ ಉದ್ಯಮಿ ಯೋಗೀಶ್ ಎಸ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಎಂ ಕೆ ಬಾಲರಾಜ್, ಹರೀಶ್ ಕುಮಾರ್ ಸೌಂದರ್ಯ, ಸದಾಶಿವ ಅಮೀನ್ ಕಟ್ಟೆಗುಡ್ಡೆ, ರಾಜಾರಾಮ್ ಭಟ್ ಆರೂರು ತೋಟ, ಪ್ರಭಾಕರ ಗಾಣಿಗ, ಕಾರ್ಯಾಧ್ಯಕ್ಷರಾಗಿ ಯು.ಎ ಲಕ್ಷ್ಮೀ ನಾರಾಯಣ ರಾವ್, ಗಣೇಶ್ ಕುಮಾರ್, ಜಿತೇಂದ್ರ ಶೆಟ್ಟಿ, ರಮಾನಂದ ಸೇರಿಗಾರ್, ಆನಂದ್ ಉದ್ಯಾವರ, ರಿಯಾಜ್ ಪಳ್ಳಿ  ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಮುರಳಿ ಸಾಲ್ಯಾನ್, ಜತೆ ಕಾರ್ಯದರ್ಶಿ ಮಾಧವ ಸಂಪಿಗೆ ನಗರ, ಕೋಶಾಧಿಕಾರಿ ಕಿಶೋರ್ ಕುಮಾರ್, ಸಾಂಸ್ಕೃತಿಕ ಕಾರ್ಯದರ್ಶಿ ಅಶೋಕ್ ಪಾಲನ್, ಕೃಷ್ಣರಾಜ್, ಸಂತೋಷ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕೇಶವ ಗಾಣಿಗ , ಮೊಹಮ್ಮದ್ ಇರ್ಫಾನ್, ರಮೇಶ್ ಗಾಣಿಗ, ಭಾಸ್ಕರ ಕೋಟ್ಯಾನ್, ಶ್ರೀಧರ ಕೋಟ್ಯಾನ್, ದಿನೇಶ್ ಕರ್ಕೇರ, ವಿಕ್ರಮ್, ಉಮೇಶ್ ಜತ್ತನ್ನ, ಜಯರಾಮ್ ಜಿ, ರಹಮತ್ತುಲ್ಲಾ ಅಬ್ಬಾಸ್, ಶ್ರೀಧರ ಜತ್ತನ್ನ, ನಾಗೇಶ್ ಗರಡಿ ಮಜಲು, ಸತೀಶ್ ಗಾಣಿಗ, ಪ್ರಭಾಕರ ಸುವರ್ಣ, ಸುಧಾಕರ ಸಾಲ್ಮರ, ರಾಘು ಮೇಸ್ತ್ರಿ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!