ಶಾಸಕರ ಮನೆಗೆ ಬೆಂಕಿ ಹಚ್ಚಿರುವುದು ಖಂಡನೀಯ : ಕೋಟ ಶ್ರೀನಿವಾಸ್ ಪೂಜಾರಿ

ಉಡುಪಿ(ಉಡುಪಿ ಟೈಮ್ಸ್ ವರದಿ )- ಬೆಂಗಳೂರಿನಲ್ಲಿ ನಿನ್ನೆಯಿಂದ ನಡೆಯುತಿರುವ ಕಿಡಿಗೇಡಿಗಳ ದಾಂದಲೆ ಹಾಗು ಪುಲಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯವರ ಮನೆಗೆ ಬೆಂಕಿ ಹಚ್ಚಿದರ ಕುರಿತು ರಾಜ್ಯ ಸರಕಾರದ ಒಳನಾಡು ಜಲ ಸಾರಿಗೆ ಹಾಗು ಮುಜರಾಯಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಖಂಡಿಸಿದ್ದಾರೆ.


ಈ ಬಗ್ಗೆ ಮಾತನಾಡಿದ ಕೋಟ ಯಾವುದೇ ಭಿನ್ನಾಭಿಪ್ರಾಯಗಳನ್ನು ಮಾತನಾಡಿ ಬಗೆಹರಿಸಬಹುದು. ಆದರೆ ಈ ರೀತಿ ಶಾಸಕರ ಮನೆಗೆ ಬೆಂಕಿ ಹಚ್ಚಿರುವುದು ಖಂಡನೀಯ ಎಂದರು. ಈ ಸಂದರ್ಭದಲ್ಲಿ ಗಲಭೆ ಎಬ್ಬಿಸಿರುವ ಕಿಡಿಗೇಡಿಗಳ ಮೇಲೆ ರಾಜ್ಯ ಮುಖ್ಯ ಮಂತ್ರಿ ಹಾಗು ಗೃಹ ಸಚಿವರು ಸಮಯೋಚಿತ ನಿರ್ದಾಕ್ಷಿಣ ಕ್ರಮವನ್ನ ತೆಗೆದುಕೊಂಡಿರುವುದು ಸ್ವಾಗತರ್ಹ ಎಂದರು. ಈ ಗಲಭೆ ಇಲ್ಲಿಗೆ ಶಾಂತವಾಗಿ ಮುಂದೆ ಮರುಕಳಿಸದಿರಲಿ ಎಂಬುದಾಗಿ ಮನವಿ ಮಾಡಿದರು .

Leave a Reply

Your email address will not be published. Required fields are marked *

error: Content is protected !!