ಕುಂದಾಪುರ : ಕೆರೆಯಾದ ರಾಷ್ಟ್ರೀಯ ಹೆದ್ದಾರಿ, ಶಾಸಕರು ಸ್ಥಳದಲ್ಲೇ ಮೊಕ್ಕಾಂ

ಕುಂದಾಪುರ (ಉಡುಪಿ ಟೈಮ್ಸ್ ವರದಿ ): ನವಯುಗದ ಕಳಪೆ ಕಾಮಗಾರಿಯ ಫಲ ದಿನನಿತ್ಯ ಕುಂದಾಪುರದ ರಾಷ್ಟ್ರೀಯ ಹೆದ್ದಾರಿ ಕೆರೆಯಂತೆ ಮಾರ್ಪಾಡಾಗುತ್ತಿದ್ದು ಇತ್ತೀಚೆಗೆಷ್ಟೇ ಅದೇ ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಕೋಟ ಶ್ರೀನಿವಾಸ್ ಪೂಜಾರಿಯವರ ಕಾರನ್ನು ಸ್ಥಳೀಯರು ತಡೆದು ಆಕ್ರೋಶ ವ್ಯಕ್ತ ವ್ಯಕ್ತಪಡಿಸಿದ್ದರು.

ಇಂದು ಮತ್ತೆ ಅದೇ ಸಮಸ್ಯೆ ತಲೆದೋರಿದಾಗ ಸ್ಥಳಕ್ಕೆ ಭೇಟಿ ನೀಡಿದ ಕುಂದಾಪುರ ಭಾಗದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡದ್ದು ಮಾತ್ರವಲ್ಲದ್ದೆ ಸುಮಾರು ೪ ತಾಸುಗಳ ಕಾಲ ಸ್ಥಳದಲ್ಲೇ ಇದ್ದು ಚರಂಡಿಯ ಅವ್ಯವಸ್ಥೆಯನ್ನ ಮಾಡಿಸಿದರು. ಶಾಸಕರ ಈ ಕಾರ್ಯಕ್ಕೆ ಸ್ಥಳೀಯರಿಂದ ವ್ಯಾಪಕ ಪ್ರಶಂಸೆ ದೊರೆತಿದೆ.

Leave a Reply

Your email address will not be published. Required fields are marked *

error: Content is protected !!