ಲಂಚ ಪಡೆಯುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ

ಕಾರವಾರ: ರೈತನಿಂದ ಲಂಚ ಪಡೆಯುತಿದ್ದ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಹಶಿಲ್ದಾರ್ ಕಚೇರಿಯಲ್ಲಿ ನಡೆದಿದೆ.  ಹಳಿಯಾಳ ತಹಶಿಲ್ದಾರ್ ಕಚೇರಿಯಲ್ಲಿ ಐದು ಸಾವಿರ ಹಣ ಪಡೆಯುವಾಗ  ಸಿಕ್ಕಿಬಿದ್ದ ತತ್ವಣಗಿ ಗ್ರಾಮದ ಲೆಕ್ಕಾಧಿಕಾರಿ ಗಿರೀಶ್ ರಾಣದೇವ್. ತತ್ವಣಗಿ ಗ್ರಾಮದ ರೈತ ಬೀಮರಾವ್ ರಾಯಪ್ಪ ಕುರುಬೂರ್ ಎಂಬುವವರ ಬಳಿ ಖಾತೆ ಮಾಡಿ ಕೊಡಲು ಲಂಚ ಕೇಳಿದ್ದ ವಿಎ. ಎಸಿಬಿಗೆ ದೂರು ಹಿನ್ನೆಲೆಯಲ್ಲಿ  ಕಾರವಾರದ ಎಸಿಬಿ ಡಿವೈಎಸ್ಪಿ ಗಿರೀಶ್ ನೇತ್ರತ್ವದ ತಂಡ ದಾಳಿ ನಡೆಸಿ ಹಣದ ಸಮೇತ ವಶಪಡಿಸಿಕೊಂಡಿದ್ದಾರೆ. ಕಾರವಾರ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!