ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ; ಟ್ವಿಟರ್ ನಲ್ಲಿ ಗುಂಡೂರಾವ್ ಕಾಲೆಳೆದ ನೆಟ್ಟಿಗರು

ಬೆಂಗಳೂರು (ಉಡುಪಿ ಟೈಮ್ಸ್ ವರದಿ): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮೇಲೆ ನಡೆದ ಸಿಬಿಐ ದಾಳಿಗೆ ಕಾಂಗ್ರೆಸ್ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು. ಈ ಸಂಬಂಧ ಮಾಜಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮಾಡಿದ ಟ್ವೀಟ್ ಗೆ ನೆಟ್ಟಿಗರು ಆಕ್ರೋಶವಾಗಿ ರೀ ಟ್ವಿಟ್ ಮಾಡಿದ್ದಾರೆ “@DKShivakumar ಮನೆ ಮೇಲಿನ #CBI ದಾಳಿ ರಾಜಕೀಯ ಪ್ರೇರಿತ. ಶಿರಾ ಹಾಗೂ R.R.ನಗರ ಉಪಚುನಾವಣೆಯ ಸಂದರ್ಭದಲ್ಲೇ ಈ ದಾಳಿ ನಡೆದಿರುವುದು ಅದರ ಹಿಂದಿನ ಉದ್ದೇಶ ತೋರಿಸುತ್ತದೆ.

ಬಿಜೆಪಿ ನಾಯಕರು ತಮ್ಮ ದ್ವೇಷದ ರಾಜಕಾರಣಕ್ಕೆ ತಕ್ಕ ಬೆಲೆ ತೆರುವ ದಿನ ದೂರವಿಲ್ಲ” ಎಂದು ಗುಂಡು ರಾವ್ ಟ್ವಿಟ್ ಮಾಡಿದ್ದರು ಆದರೆ ಇದಕ್ಕೆ ಪ್ರತಿಕ್ರಿಯೆ ಯಾಗಿ ನೆಟ್ಟಿಗರು “ಅದೇ ರಾಗ ಅದೇ ಹಾಡು. ಕೇಳಿ ಕೇಳಿ ಕಿವಿ ತೂತಾಗಿದೆ. ಬೇರೆ ಏನಾದ್ರು ಹೇಳಿ ಸ್ವಾಮಿ. ಡಿಕೆಶಿ ಸಿಎಂ ಆಗಬಾರದೆಂದು ಕಾಂಗ್ರೆಸ್ ನ ಕೆಲವು ಪ್ರಮುಖರೆ ಯಾಕೆ ಮಾಡಿಸಿರಬಾರದು. ಅದೇ ಮೊನ್ನೆ ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ ನಾಟಕಕ್ಕೆ ಸ್ಕ್ರಿಪ್ಟ್ ಮಾಡಿದ್ರಲ್ಲ ಹಾಗೆ”


ನೀವೇ ಯಾಕೆ ಮಾಡಿಸಿರಬಾರ್ದು ನಿಮಗೂ ಡಿ ಕೆ ಶಿ ಗೆ ಆಗಿಬರಲ್ಲ? : “ನಿಮ್ಮದೇ ಕೈವಾಡ ಇರುತ್ತೆ ಹೆಂಗೂ ನಿಮಗೂ ಡಿಕೆಶಿ ಗೆ ಆಗ್ ಬರಲ್ಲ ಅದೇನ್ ಡವ್ ಮಾಡ್ತೀರಾ ಗುಂಡಣ್ಣ. ನೀವೇನ್ ತಿಪ್ಪರಲಾಗ ಹಾಕಿದ್ರು ಆರ್ ಆರ್ ನಗರ, ಶಿರಾ ಗೆಲ್ಲಲ್ಲ ಸುಮ್ನೆ ಕಾಲಹರಣ” ಎನ್ನುವ ಕಾಮೆಂಟ್ ದಿನೇಶ್ ಗುಂಡೂರಾವ್ ಟ್ವೀಟ್ ಗೆ ಬಂದಿದೆ.
ಪಾಪ ದಿನೇಶ್ ಅಣ್ಣನ ಮೇಲೆ ಇನ್ನೂ ರೇಡ್ ಆಗಿಲ್ಲ,5 ಕಡೆ ರೇಡ್ ಮಾಡ್ತಾರೆ ಅಂದ್ರೆ ಅಷ್ಟು ಬೇಗ ಹೇಗೆ ಆಸ್ತಿ ಮಾಡಿದ್ರು? ಒಬ್ಬ ಎರಡು ಎಕ್ರೆ ರೈತನ ಮಗ! ನಾವು business management ಓದಿದ್ದು ವ್ಯರ್ಥ.ಸುಮ್ಮನೆ ನಿಮ್ಮ ಜೊತೆ ಇಡಿದ್ದರೆ 500ರೂಪಾಯಿಗೆ ಜೈ ಅಂದಿದ್ದಾರೆ ಸಾಕಿತ್ತು ಅಲ್ಲವೇ’ ಎನ್ನುವ ಕಾಮೆಂಟ್ ಬಂದಿದೆ.

Leave a Reply

Your email address will not be published. Required fields are marked *

error: Content is protected !!