ಮಾಂಸ ತಿಂದು ದೇಗುಲಕ್ಕೆ ಹೋದ ಸಿದ್ದರಾಮಯ್ಯ ಹಂದಿ ತಿಂದು ಮಸೀದಿಗೆ ಹೋಗ್ತಾರಾ..? :ಸೊಗಡು ಶಿವಣ್ಣ

ತುಮಕೂರು ಸೆ.29 : ಮಾಂಸ ತಿಂದು ದೇಗುಲಕ್ಕೆ ಹೋದ ಸಿದ್ದರಾಮಯ್ಯ ಹಂದಿ ತಿಂದು ಮಸೀದಿಗೆ ಹೋಗ್ತಾರಾ..? ಎಂದು ಸೊಗಡು ಶಿವಣ್ಣ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ತಾಲಿಬಾನ್ ಹೇಳಿಕೆಗೆ ತುಮಕೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಆರ್.ಎಸ್.ಎಸ್. ಬಗ್ಗೆ ಸಿದ್ದರಾಮಯ್ಯನಂತಹ ಮೀರ್ ಸಾದಿಕ್ ಗೆ ಹೇಗೆ ಗೊತ್ತಾಗಬೇಕು. ಸಿದ್ದರಾಮಯ್ಯ ಕನ್ವರ್ಟ್ ಆಗಿದ್ದಾರೆ. ಅವರು ಧರ್ಮಸ್ಥಳಕ್ಕೆ ಹೋಗುವ ಮುನ್ನ ಕೋಳಿ ತಿಂದೆ ಎಂದು ಹೇಳ್ತಾರೆ. ಮಾಂಸ ತಿಂದು ಧರ್ಮಸ್ಥಳಕ್ಕೆ ಹೋದರೆ ಭಕ್ತರು ಹೇಗೆ ಸಹಿಸಿಕೊಳ್ಳಬೇಕು..? ಹಾಗಾದರೆ ಹಂದಿ ತಿಂದು ಮಸೀದಿಗೆ ಹೋಗಲಿ. ಆಗ ನಾನು ಒಪ್ಪುತ್ತೇನೆ. ಇದು ಸಿದ್ದರಾಮಯ್ಯ ಕನ್ವರ್ಟ್ ಆಗಿದ್ದಾರೆ ಅನ್ನೋದಕ್ಕೆ ಉದಾಹರಣೆ. ಇದನ್ನೇ ಕನ್ವರ್ಟ್ ಎಂದು ಕರೆಯುತ್ತಾರೆ ಎಂದು ಕಿಡಿಕಾರಿದರು.

ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, ಮೀರ್ ಸಾದಿಕ್ ಸಿದ್ದರಾಮಯ್ಯ ಮಾನ ಮರ್ಯಾದೆ ಇದ್ದಿದ್ದರೆ ಇಂತಹ ಮಾತುಗಳನ್ನು ಆಡುತ್ತಿರಲಿಲ್ಲ. ದೇಶ ವಿಭಜನೆ ಇನ್ನೂ ಎಷ್ಟು ದಿನ ಮಾಡುತ್ತೀರಾ..? ಮಾನ ಮರ್ಯಾದೆ ಇದ್ದರೆ ಬಾಯಿ ಅಮಿಕೊಂಡು ಇರಬೇಕು. ಸಿದ್ದರಾಮಯ್ಯ ಬಳಿ ಕ್ಷಮೆಗೂ ಆಗ್ರಹಿಸಲ್ಲ. ಏಕೆಂದರೆ ಆತ ಮನುಷ್ಯನೇ ಅಲ್ಲ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ರು.

ಸ್ವಾತಂತ್ರ್ಯ ಸಮಯದಲ್ಲಿ ಆರ್.ಎಸ್.ಎಸ್.ನವರೂ ಜೈಲಿಗೆ ಹೋಗಿದ್ದರು. ಸ್ವಾತಂತ್ರ್ಯ ಬಂದ ಮೂರೇ ತಿಂಗಳಲ್ಲಿ ಪಾಕಿಸ್ತಾನದವರು ಕಾಶ್ಮೀರ ನಮ್ಮದು ಎಂದರು. ರಾಜಾ ಹರಿಸಿಂಗ್ ಇನ್ನೂ ಬಿಟ್ಟುಕೊಟ್ಟಿರಲಿಲ್ಲ. ಅಷ್ಟರಲ್ಲೇ ಸ್ವಯಂ ಸೇವಕರು ಅಲ್ಲಿಗೆ ಹೋಗಿದ್ದರು. ದೇಶದಲ್ಲಿ ಆಪತ್ತು ಬಂದಾಗಲೆಲ್ಲ ಆರ್.ಎಸ್.ಎಸ್.ನವರು ಕೆಲಸ ಮಾಡಿದ್ದಾರೆ ಎಂದರು.

Leave a Reply

Your email address will not be published. Required fields are marked *

error: Content is protected !!