ಮಲ್ಪೆ:ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ನಾಲ್ವರು ಪ್ರವಾಸಿಗರ ರಕ್ಷಣೆ

ಉಡುಪಿ ಸೆ.24( ಉಡುಪಿ ಟೈಮ್ಸ್ ವರದಿ): ಮಲ್ಪೆ ಕಡಲ ಕಿನಾರೆಯಲ್ಲಿ ನೀರಿನಲ್ಲಿ ಸಿಲುಕಿದ್ದ ನಾಲ್ವರು ಪ್ರವಾಸಿಗರನ್ನು ರಕ್ಷಿಸಿರುವ ಘಟನೆ ಇಂದು ನಡೆದಿದೆ.

ಎರಡು ಪ್ರತ್ಯೇಕ ಘಟನೆ ಯಲ್ಲಿ ಗುಲ್ಬರ್ಗ ಮೂಲದ ಮೂವರು ಯುವಕರು ಹಾಗೂ ಓರ್ವ ಮಂಡ್ಯಾದ ಯುವಕನನ್ನು ರಕ್ಷಿಸಲಾಗಿದೆ. ಗುಲ್ಬರ್ಗ ದ ಅನಿಲ್ ಕುಮಾರ್(21), ಅಬ್ಬಾಸ್ ಅಲಿ(19), ಅನಿಲ್ ಕುಮಾರ್(21) ಹಾಗೂ ಮಂಡ್ಯ ದ ನೆರಕೆರೆ ಗ್ರಾಮದ ನಿತಿನ್ (18), ರಕ್ಷಿಸಲ್ಪಟ್ಟ ಯುವಕರು.

ಈ ನಾಲ್ವರು ಇಂದು ಮಲ್ಪೆ ಕಡಲ ಕಿನಾರೆಗೆ ಪ್ರವಾಸಕ್ಕೆ ಬಂದಿದ್ದು, ಮಧ್ಯಾಹ್ನದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿದ್ದರು. ಒಂದು ಘಟನೆಯಲ್ಲಿ ಗುಲ್ಬರ್ಗ ಮೂಲದ ಮೂವರು ಯುವಕರನ್ನು ಹಾಗೂ ಮತ್ತೊಂದು ಘಟನೆಯಲ್ಲಿ ಮಂಡ್ಯದ ಓರ್ವ ಯುವಕನನ್ನು ಜೀವರಕ್ಷಕ ತಂಡದ ಸಿಬ್ಬಂದಿ ಗಳು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!