ಜಯಂಟ್ಸ್ ಸಪ್ತಾಹದ ಸಮಾರೋಪ ಸಮಾರಂಭ : ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ
ಬ್ರಹ್ಮಾವರ(ಉಡುಪಿ ಟೈಮ್ಸ್ ವರದಿ): ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಮತ್ತು ಜನ ಔಷಧಿ ಬ್ರಹ್ಮಾವರ ಜಂಟಿ ಆಶ್ರಯದಲ್ಲಿ ಜಯಂಟ್ಸ್ ಸಪ್ತಾಹದ ಸಮಾರೋಪ ಸಮಾರಂಭ ಅಂಗವಾಗಿ ಪೌರ ಕಾರ್ಮಿಕರ ಸನ್ಮಾನ ಕಾರ್ಯಕ್ರಮ ಇಂದು ಅಜ್ಜರಕಾಡು ಪುರಭವನ ದಲ್ಲಿ ನಡೆಯಿತು.
ಉಡುಪಿ ನಗರ ಸಭೆಯ ಪೌರಾಯುಕ್ತ ಡಾ ಉದಯ ಶೆಟ್ಟಿ ರವರು ನಗರ ಸಭೆಯಲ್ಲಿ 30 ವರ್ಷ್ ಕ್ಕೂ ಹೆಚ್ಚಿನ ಸೇವೆ ಸಲ್ಲಿಸಿದ ಪೌರ ಕಾರ್ಮಿಕರಾದ ತೇಜಪ್ಪ, ಲಕ್ಶ್ಮಣ ರವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿದರು. ಉಡುಪಿ ನಗರ ಸಭೆಯ ಹಿರಿಯ ಅರೋಗ್ಯ ಅಧಿಕಾರಿ ಕರುಣಾಕರ ಹಾಗು ದ್ವಿತೀಯ ದರ್ಜೆ ಸಹಾಯಕರಾದ ಮನೋಹರ್ ಅವರನ್ನು ಡಾಕ್ಟರ್ ವಿಜೇಯೇಂದ್ರ ಡಾ. ರಾಮಚಂದ್ರ ಕಾಮತ್ ಜತೆಗೂಡಿ ಸನ್ಮಾನಿಸಿದರು.
ನಗರ ಸಭಾ ಸದಸ್ಯರಾದ ಕೃಷ್ಣ ರಾವ್ ಕೊಡಂಚ, ರಶ್ಮಿ ಭಟ್ , ಜಯಂಟ್ಸ್ ಗ್ರೂಪ್ ಬ್ರಹ್ಮಾವರದ ಅಧ್ಯಕ್ಷರಾದ ಸುಂದರ್ ಪೂಜಾರಿ, ವಲಯ ನಿರ್ದೇಶಕರಾದ ದೇವದಾಸ್ ಕಾಮತ, ಸುವರ್ಣ ಎಂಟರ್ಪ್ರೈಸಸ್ ಮಾಲಕರಾದ ಮಧುಸೂಧನ್ ಹೇರೂರು ಪೌರಕಾರ್ಮಿಕರಿಗೆ ಮಾಸ್ಕ ಹಾಗು ಹ್ಯಾಂಡ್ ಗ್ಲೋಸ್ಸ್ ವಿತರಿಸಿದರು. ಸೇವಾ ಭಾರತೀಯ ಪ್ರಭಾಕರ್ ಭಟ್, ವೈದ್ಯಕೀಯ ಪ್ರತಿನಿಧಿ ಸಂಘದ ಪ್ರಸನ್ನ ಕುಮಾರ್ ಹಾಗು ಪದಾಧಿಕಾರಿಗಳು ಉಪಸ್ಥಿತರಿದ್ದರು.