ಬಹರೈನ್: ಮಾಜಿ ಸಚಿವ ದಿವಂಗತ ಆಸ್ಕರ್ ಫೆರ್ನಾಂಡಿಸ್ ರವರ ಸ್ಮರಣಾರ್ಥ ಸಂತಾಪ ಸೂಚನಾ ಸಭೆ

ಬಹರೈನ್ (ಉಡುಪಿ ಟೈಮ್ಸ್ ವರದಿ): ಭಾರತ ಸರಕಾರದ ಮಾಜಿ ಸಚಿವ, ರಾಜ್ಯಸಭಾ ಸದಸ್ಯ ದಿವಂಗತ ಆಸ್ಕರ್ ಫೆರ್ನಾಂಡಿಸ್ ರವರ ಗೌರವಾರ್ಥವಾಗಿ ಪಾಪ್ಪಿಲ್ಲಾನ್ ನ ಸಭಾಂಗಣದಲ್ಲಿ ಇಂದು ಸಂತಾಪ ಸೂಚನಾ ಸಭೆ ಜರಗಿತು. ಬಹರೈನ್ ನ ವಿವಿಧ ಸಂಘ ಸಂಸ್ಥೆಗಳ ಗಣ್ಯರು ಸಭೆಗೆ ಆಗಮಿಸಿ ತಮ್ಮ ಶ್ರದ್ಧಾಂಜಲಿಯನ್ನು ಅರ್ಪಿಸಿದರು.

ಸೇಕ್ರೆಡ್ ಹಾರ್ಟ್ ದೇವಾಲಯದ ಧರ್ಮಗುರುಗಳಾದ ಫಾದರ್ ಡೆರಿಲ್ ಫೆರ್ನಾಂಡಿಸ್, ಭಾರತೀಯ ಸಾಗರೋತ್ತರ ಕಾಂಗ್ರೆಸ್ ನ ಅಧ್ಯಕ್ಷರಾದ ಮಹಮ್ಮದ್ ಮನ್ಸೂರ್, ಕನ್ನಡ ಸಂಘದ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ, ಕನ್ನಡ ಸಂಘದ ಉಪಾಧ್ಯಕ್ಷರಾದ ರಮೇಶ್ ಡಿ., ಕರ್ನಾಟಕ ಸೋಷಿಯಲ್ ಕ್ಲಬ್ ನ ಅಧ್ಯಕ್ಷರಾದ ಸುನಿಲ್ ಡಿ’ಸೋಜಾ, ಬಂಟ್ಸ್ ಬಹರೈನ್ ನ ಅಧ್ಯಕ್ಷರಾದ ಮೋಹನ್ ದಾಸ್ ರೈ, ಬಹರೇನ್ ಬಿಲ್ಲವಾಸ್ ನ ಮಾಜಿ ಅಧ್ಯಕ್ಷರಾದ ಕೃಷ್ಣ ಸುವರ್ಣ, ಕೊಂಕಣ್ ಸಿಂಗರ್ಸ್ ನ ಅಧ್ಯಕ್ಷರಾದ ಸ್ಟೀವನ್, ಬಹರೈನ್ ಬಸವ ಸಮಿತಿಯ ಶಿವಾನಂದ್ ಪಾಟೀಲ್, ಬಹರೈನ್ ನ ಹಿರಿಯ ಸುದ್ದಿ ಸಂಪಾದಕರಾಗಿರುವ ಕೃಷ್ಣ ಭಟ್, ಬಹರೈನ್ ನ ಕನ್ನಡ ಭಾಷೆ-ಸಂಸ್ಕೃತಿಯ ರಾಯಭಾರಿ ಶ್ರೀ ಕಮಲಾಕ್ಷ ಅಮೀನ್, ಕನ್ನಡ-ಕೊಂಕಣಿ ಸಮುದಾಯದ ಹಿರಿಯರಾದ ಹೆನ್ರಿ ಅಲ್ಮೇಯ್ಡಾ, ಬಂಟ್ಸ್ ಬಹರೈನ್ ನ ಮಾಜಿ ಅಧ್ಯಕ್ಷರಾದ ಕರ್ಮಾರ್ ನಾಗೇಶ್ ಶೆಟ್ಟಿ, ಬಹರೈನ್ ಕ್ರಿಕೆಟ್ ಫೆಡರೇಷನ್ ನ ಸದಸ್ಯ ಅಬ್ದುಲ್ ಅಝೀಜ್, ಕನ್ನಡ ಸಂಘದ ಚಂದ್ರಹಾಸ ಐಲ್, ಸಂತೋಷ್ ಆಚಾರ್,ಸುರೇಶ್ ಹಳೆಯಂಗಡಿ,ಸಲೀಂ ಪುತ್ತೂರು, ಲೋಲಾಕ್ಷಿ ರಾಜಾರಾಮ್, ಹಿರಿಯರಾದ ಹಿಲಾರಿ ಟೆಲಿಸ್, ಸಂಜಯ್ ಸಿಕ್ವೆರಾ, ಮಹಮ್ಮದ್ ಮಸೂದ್ ವಿಟ್ಲಾ, ಇವರುಗಳು ಶೃದ್ಧಾಂಜಲಿ ಅರ್ಪಿಸಿದರು. ಆಸ್ಟಿನ್ ಸಂತೋಷ್ ಹಾಗೂ ಶಂಕರ್ ಜತನ್ನರವರ ನೇತೃತ್ವದಲ್ಲಿ ಆಸ್ಕರ್ ಫೆರ್ನಾಂಡೀಸ್ ರವರ ಅಭಿಮಾನಿಗಳ ವತಿಯಿಂದ ಈ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

Leave a Reply

Your email address will not be published. Required fields are marked *

error: Content is protected !!