ರೋಟರಿ ಕ್ಲಬ್ ಹಂಗಾರಕಟ್ಟೆ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಆಚರಣೆ.
ಕೋಟ (ಉಡುಪಿ ಟೈಮ್ಸ್ ವರದಿ): ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಆಚರಣೆ ಯ ಅಂಗವಾಗಿ ‘ ನಮ್ಮ ಯೋಧ- ನಮ್ಮ ಹೆಮ್ಮೆ” ಎಂಬ ಕಾರ್ಯಕ್ರಮದಡಿ ನಿವೃತ್ತ ಸುಬೇದಾರ್ ಮೇಜರ್ ಗಣೇಶ್ ಅಡಿಗ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ರೋಟರಿ ಅಧ್ಯಕ್ಷೆ ಯಶೋದ .ಸಿ. ಹೊಳ್ಳ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಕ್ಲಬ್ನ ವೃತ್ತಿ ಪರ ಸೇವೆ ನಿರ್ದೇಶಕ ಆನಂದ್ ಎಂ. ಪರಿಚಯಿಸಿದರು. ಸುರೇಶ್ ಕಾರ್ಕಡ ವೀರ ಯೋಧರಿಗಾಗಿ ಭಾವನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರೋಟರಿ ಜಿಲ್ಲಾ 3182 ರ ವಲಯ 3 ರ ಸಹಾಯಕ ಗವರ್ನರ್ ಕೆ. ಪದ್ಮನಾಭ ಕಾಂಚನ್ ಬ್ರಹ್ಮಾವರ ,ರೋಟರಿ ಕ್ಲಬ್ ಬೆಂಗಳೂರು ಇದರ ಮಾಜಿ ಅಧ್ಯಕ್ಷ ರೊ.ಆರೀಫ್,ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನದ ವೃತ್ತಿಪರ ಸೇವಾ ಸಭಾಪತಿಗಳಾದ ಪಿ.ಸಿ ಹೊಳ್ಳ,ಚಂದ್ರ ನಾಯಿರಿ ಉಪಸ್ಥಿತರಿದ್ದರು. ಕಾರ್ಯದರ್ಶಿ ವಿಘ್ನೇಶ್ವರ ಅಡಿಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.