ಮುಂಬೈ: ಸಹಕಾರ ಬ್ಯಾಂಕಿಗೆ ವಂಚನೆ ಪ್ರಕರಣ ಮಾಜಿ ಶಾಸಕ ಬಂಧನ

ಮುಂಬೈ: ಸಹಕಾರ ಬ್ಯಾಂಕಿಗೆ 512.54 ಕೋಟಿ ರೂ. ವಂಚಿಸಿ ಅಕ್ರಮ ಹಣ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಶಾಸಕ ವಿವೇಕಾನಂದ ಎಸ್‌. ಪಾಟೀಲ್‌ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿದೆ.

ರಾಯಘಡ ಜಿಲ್ಲೆಯ ಪನ್ವೇಲ್‌ ಮೂಲದ ಸಹಕಾರ ಬ್ಯಾಂಕ್ ಗೆ ಈ ವಂಚನೆ ಮಾಡಲಾಗಿದೆ. ಬಲ್ಲಾರ್ಡ್‌ ಎಸ್ಟೇಟ್‌ನ ಇಡಿ ಕಚೇರಿಯಲ್ಲಿ ವಿಚಾರಣೆ ನಡೆಸಿದ ಬಳಿಕ ಮಂಗಳವಾರ ರಾತ್ರಿ 8.15ಕ್ಕೆ ಪಾಟೀಲರನ್ನು ಕೇಂದ್ರ ತನಿಖಾ ಸಂಸ್ಥೆ ಬಂಧಿಸಿದೆ.
ಆರ್ಥಿಕ ಅಪರಾಧ ವಿಭಾಗದ ನವಿ ಮುಂಬೈ ಪೊಲೀಸರು ಈ ಪ್ರಕರಣದ ಹಿನ್ನೆಲೆಯಲ್ಲಿ ಕಳೆದ ವರ್ಷ ಫೆಬ್ರವರಿಯಲ್ಲಿ 75 ಜನರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ದೂರಿದ್ದಾರೆ.

Leave a Reply

Your email address will not be published. Required fields are marked *

error: Content is protected !!