ಜೈ ಕುಂದಾಪ್ರ ಸೇವಾಟ್ರಸ್ಟ್ ವತಿಯಿಂದ ಅನೇಕ ಆಶ್ರಮಗಳಿಗೆ ದಿನಬಳಕೆಯ ಸಾಮಗ್ರಿಗಳ ವಿತರಣೆ

ಉಡುಪಿ ಜೂ10(ಉಡುಪಿ ಟೈಮ್ಸ್ ವರದಿ): ಜೈ ಕುಂದಾಪ್ರ ಸೇವಾಟ್ರಸ್ಟ್ ವತಿಯಿಂದ ಜಿಲ್ಲೆಯ ಅನಾಥಾಲಯಗಳಿಗೆ ಅಗತ್ಯ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಸಮಾಜ ಸೇವಕ ಶ್ರೀಕಾಂತ್ ಶೆಣೈ ಕೋಟ, ಹಾಗೂ ಶ್ರೀ ಶಾಸ್ತ ಮೊಬೈಲ್ ಕೋಟ ಇದರ ಮಾಲಿಕರಾದ ‌ಆದಿತ್ಯ ಕೋಟ ಅವರ ನೇತೃತ್ವದಲ್ಲಿ 18,000 ದಿಂದ 20 ,000 ರೂ ಮೌಲ್ಯದ ದಿನಬಳಕೆಯ ಸಾಮಾಗ್ರಿ ಮತ್ತು ತಿಂಡಿ ತಿನಿಸುಗಳನ್ನು ಬ್ರಹ್ಮಾವರದ ಅಪ್ಪ ಅಮ್ಮ ಅನಾಥಾಶ್ರಮ ಮತ್ತು ಮಣಿಪಾಲದ ಹೊಸ ಬೆಳಕು ಆಶ್ರಮಕ್ಕೆ ವಿತರಿಸಲಾಯಿತು.

ಈ ವೇಳೆ ಸಮಾಜ ಸೇವಕ ಶ್ರೀಕಾಂತ್ ಶೆಣೈ ಕೋಟ, ಶ್ರೀ ಶಾಸ್ತ ಮೊಬೈಲ್ ಕೋಟ ಇದರ ಮಾಲಿಕರಾದ ‌ಆದಿತ್ಯ ಕೋಟ , ಜಯರಾಜ್ ಪಡುಕರೆ ಪುಂಡಲೀಕ ತೆಕ್ಕಟ್ಟೆ, ಸಂತೋಷ್ ಹಾಡಿಕೆರೆ, ಮಹೇಶ್ ಕೋಟೇಶ್ವರ ಉಪಸ್ಥಿತರಿದ್ದರು

ಇನ್ನು ಟ್ರಸ್ಟ್ ನ ಗೌರವ ಸಲಹೆಗಾರ ದಿನೇಶ್ ಗಾಣಿಗ ಕೋಟ ಹಾಗೂ ಕೋಟೇಶ್ವರದ ಬ್ರಹ್ಮಶ್ರೀ ಡಿಸ್ಟ್ರಿಬ್ಯೂಟರ್ಸ್ ನ ಮಾಲೀಕರ ಸಹಕಾರ ದಿಂದ ಜೂ.6 ರಂದು ಸಂತೆ ಕಟ್ಟೆಯ ಕೃಷ್ಣಾನುಗ್ರಹ ಆಶ್ರಮ ಮತ್ತು ಉಪ್ಪೂರುವಿನ ಸ್ಪಂದನ ಆಶ್ರಮ, ದೇವರ ಮಕ್ಕಳು ಈ ಎರಡು ಆಶ್ರಮಕ್ಕೆ ಬೇಟಿ ನೀಡಿ ದಿನಬಳಕೆಯ ಸಾಮಾಗ್ರಿಗಳು ಮಕ್ಕಳಿಗೆ ಬೇಕಾಗುವ ತಿಂಡಿ ತಿನಿಸುಗಳನ್ನು ಹಸ್ತಾಂತರಿಸಲಾಯಿತು.


ಈ ಸಂದರ್ಭದಲ್ಲಿ ಸಮಾಜಸೇಕರು, ಪತ್ರಕರ್ತರಾದ ದಿನೇಶ್ ಗಾಣಿಗ, ಸಂತೋಷ್ ಪಡುಕರೆ, ಜಯರಾಜ್ ಪಡುಕರೆ, ಪುಂಡಲೀಕ ತೆಕ್ಕಟ್ಟೆ, ಮನೀಶ್ ಕುಲಾಲ್, ಶ್ರೀದೇವಿ, ಸುರೇಶ್ ಶೆಟ್ಟಿ, ಅಕ್ಷಯ , ಅಶೋಕ್, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!