ಗಾಂಧೀ ಜಯಂತಿ ಜಾಥ- ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿಗಳಿಂದ ಜ್ಯೂಸ್ ವಿತರಣೆ

ಉಡುಪಿ ಅ.03 (ಉಡುಪಿ ಟೈಮ್ಸ್ ವರದಿ): ಗಾಂಧಿಜಯಂತಿ ಪ್ರಯುಕ್ತ ಉಡುಪಿಯಲ್ಲಿ ನಡೆದ ಗಾಂಧಿ ಸ್ಮೃತಿ, ಬೃಹತ್ ಜನಜಾಗೃತಿ ಜಾಥಾ ಮತ್ತು ಸಮಾವೇಶದಲ್ಲಿ ಭಾಗವಹಿಸಿದವರಿಗೆ ಸುಮಾರು ೫ಸಾವಿರ ಮಂದಿ ಕಾರ್ಯಕರ್ತರಿಗೆ  ಕೆ.ಕೃಷ್ಣಮೂರ್ತಿ ಆಚಾರ್ಯಕಿನ್ನಿಮೂಲ್ಕಿ ಇವರ ಅಭಿಮಾನಿಗಳ ಬಳಗದ ಆಶ್ರಯದಲ್ಲಿ ಫ್ರೆಶ್ ಕಲ್ಲಂಗಡಿಯ ಜ್ಯೂಸ್ ನ್ನು ವಿತರಿಸಲಾಯಿತು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್  ಉಡುಪಿ ಜಿಲ್ಲೆ ಅಖಿಲ ಕರ್ನಾಟಕ  ಜನಜಾಗೃತಿ ವೇದಿಕೆ ಟ್ರಸ್ಟ್ ಉಡುಪಿ ಜಿಲ್ಲೆ ಇವರ ವತಿಯಿಂದ ನಡೆದ ಜಾಥಕ್ಕೆ ನಗರದ ಜೋಡುಕಟ್ಟೆಯಲ್ಲಿ ಜಾಲನೆಯನ್ನು ನೀಡಲಾಯಿತು.

ಬಳಿಕ ನಗರದ ಕೋರ್ಟ್ ಮುಂಭಾಗ ಮಾರ್ಗವಾಗಿ ನಗರದ ಕೆ.ಎಂ.ಮಾರ್ಗ, ತ್ರಿವೇಣಿ ಸರ್ಕಲ್, ಸಂಸ್ಕೃತ ಕಾಲೇಜು, ಕನಕದಾಸ ರಸ್ತೆಯ ಮೂಲಕ ಜಾಥಾವು ಶ್ರೀಕೃಷ್ಣಮಠದ ರಾಜಾಂಗಣ, ಪಾರ್ಕಿಂಗ್ ಆವರಣದಲ್ಲಿ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಉಡುಪಿ ವಿಧಾನಸಭಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಕೆ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ , ಉಡುಪಿ ಬ್ಲಾಕ್  ಮೀನುಗಾರರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಚರಣರಾಜ್ ಬಂಗೇರ, ಸುನಿಲ್ ಬೈಲಕೆರೆ , ಪ್ರವೀಣ್ ಬಾರಕೂರು ಹಾಗೂ ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿ ಬಳಗದ  ಸದಸ್ಯರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!