ಹಕ್ಲಾಡಿ: ಶ್ರೀಲಕ್ಷ್ಮೀ ಚೆನ್ನಕೇಶವ ಭಜನಾ ಮಂಡಳಿಯಿಂದ ನವರಾತ್ರಿಗೆ 9 ದಿನ ಭಜನಾ ಸೇವೆ

ಉಡುಪಿ ಅ.01(ಉಡುಪಿ ಟೈಮ್ಸ್ ವರದಿ): ಶ್ರೀ ಲಕ್ಷ್ಮೀ ಚೆನ್ನಕೇಶವ ಭಜನಾ ಮಂಡಳಿ ಮಾಣಿಕೊಳಲು ಹಕ್ಲಾಡಿ ಯ ಪುಟಾಣಿ ಗಳಿಂದ ನವರಾತ್ರಿಯ ನವದಿನದಂದು ಕಾರ್ಣಿಕದ ದೇವಸ್ಥಾನಗಳಲ್ಲಿ ಒಂಬತ್ತು ದಿನ ಭಜನಾ ಸೇವೆ ನಡೆಯಲಿದೆ

ನವರಾತ್ರಿ ಪ್ರಯುಕ್ತ  ಹಲವು ಮಕ್ಕಳ ತಾಯಿ  ಕೋಟ ಅಮೃತೇಶ್ವರಿ ದೇವಸ್ಥಾನ, ಕಳಿಬೈಲ್ ಸ್ವಾಮಿ ಕೊರಗಜ್ಜ ಹಾಗು ಪರಿವಾರ ದೈವಸ್ಥಾನ ಮೂಡುಹಡು ಸಾಸ್ತಾನ, ಶ್ರೀ ವನದುರ್ಗಾ ಪರಮೇಶ್ವರಿ ದೇವಸ್ಥಾನ ಕಾಜ್ರಳ್ಳಿ, ದೇವಿಯ ಜನನ ವಾದ ಮೂಲ ನಕ್ಷತ್ರ ದ ಪುಣ್ಯದ ದಿನದಂದು ಶ್ರೀ ಕ್ಷೇತ್ರ ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ,  ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ ಕಮಲಶಿಲೆ, ಶ್ರೀ ಗುಹೇಶ್ವರ ದೇವಸ್ಥಾನ ಗುಜ್ಜಾಡಿ, ಕೊಕ್ಕರ್ಣೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ, ಶ್ರೀ ಶಾರದ ಮಂಟಪ ಗಂಗೊಳ್ಳಿ ಸಾರ್ವಜನಿಕ ಶಾರದೋತ್ಸವ ಸಮಿತಿ ಗಂಗೊಳ್ಳಿ, ಶ್ರೀ ಶಾರದೋತ್ಸವ ಸಮಿತಿ ಕಂಡ್ಲೂರು ಇಲ್ಲಿ ಭಜನಾ ಸೇವೆ ನಡೆಯಲಿದೆ. 

Leave a Reply

Your email address will not be published. Required fields are marked *

error: Content is protected !!