ಕುಂದಾಪುರ: ಅ. 3-12 -ಶ್ರೀ ಬಗಳಾಂಬ ತಾಯಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ

ಕುಂದಾಪುರ ಸೆ.30 (ಉಡುಪಿ ಟೈಮ್ಸ್ ವರದಿ): ಚಿಕ್ಕನ್‌ಸಾಲ್  ರಸ್ತೆಯ ಶ್ರೀ ಬಗಳಾಂಬ ತಾಯಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಅ.3 ರಿಂದ 12ರವರೆಗೆ ನಡೆಯಲಿದೆ.

ಅ.3 ರಂದು ಬೆಳಗ್ಗೆ ಕಲಶ ಸ್ಥಾಪನೆಯೊಂದಿಗೆ ಉತ್ಸವಕ್ಕೆ ಚಾಲನೆ ದೊರಕಲಿದ್ದು, ಅಮ್ಮನವರಿಗೆ ವಿಶೇಷ ಅಲಂಕಾರ, ಮಧ್ಯಾಹ್ನ ಮಹಾ ಪೂಜೆ, ಮಂಗಳಾರತಿ, ತೀರ್ಥಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಸ್ಥಳೀಯ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮ ಜರುಗಲಿದೆ.

ಅ.4 ರಿಂದ 9 ರವರೆಗೆ ಪ್ರತಿದಿನ ಅಮ್ಮನವರಿಗೆ ವಿಶೇಷ ಅಲಂಕಾರ, ಮಧ್ಯಾಹ್ನ ಮಹಾಪೂಜೆ, ಮಂಗಳಾರತಿ, ತೀರ್ಥಪ್ರಸಾದ ವಿತರಣೆ, ಅನ್ನಸಂತರ್ಪಣೆ,ಸಂಜೆ ಸ್ಥಳೀಯ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ  ಅ.10ರಂದು ಬೆಳಗ್ಗೆ 9ಕ್ಕೆ ಪುಣ್ಯಾಹ, ಗಣಪತಿ ಪೂಜೆ,  “ಸಾಮೂಹಿಕ ಚಂಡಿಕಾಯಾಗ”, ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿ, ಮಹಾಪೂಜೆ, ತೀರ್ಥಪ್ರಸಾದ ವಿತರಣೆ ಬಳಿಕ ಸಾರ್ವಜನಿಕ “ಮಹಾ ಅನ್ನಸಂತರ್ಪಣೆ” ನಡೆಯಲಿದೆ.

ಅ.11 ರಂದು ರಾತ್ರಿ 8 ಗಂಟೆಗೆ “ಮಹಾ ರಂಗಪೂಜೆ ” ಹಾಗೂ ಅ. 12 ರಂದು ಬೆಳಿಗ್ಗೆ ಕಲಶ ವಿಸರ್ಜನೆ ನಡೆಯಲಿದೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಮರಕಡ ಶ್ರೀ ಗುರುಪರಾಶಕ್ತಿ ಮಠದ ಶ್ರೀನರೇಂದ್ರನಾಥ ಯೋಗಿಶ್ವರೇಶ್ವರ ಸ್ವಾಮೀಜಿ ಅನುಗ್ರಹದೊಂದಿಗೆ ವೇ.ಮೂ. ಚಂದ್ರಶೇಖರ್ ಸೋಮಯಾಜಿ ಕೋಟ ಇವರ ನೇತೃತ್ವದಲ್ಲಿ ನಡೆಯಲಿದೆ.

ಹಾಗೂ ನವರಾತ್ರಿ ಸಂದರ್ಭ ಪ್ರತಿದಿನ ತಾಯಿಗೆ ಹರಕೆ ಬಂದ ಸೀರೆಗಳ ಏಲಂ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!